ಬೆಂಗಳೂರು: ಸಿಎಂ ಬದಲಾವಣೆ ಆಗೋಲ್ಲ ಬಾಕಿ ಉಳಿದಿರುವ 8 ತಿಂಗಳು ಬಸವರಾಜ ಬೊಮ್ಮಾಯಿ ಅವರೇ ಇರುತ್ತಾರೆ ಅಂಥ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಸಿಎಂ ಬದಲಾವಣೆ ಕೇವಲ ಊಹಪೋಹಾ ಅಂತ ಹೇಳಿದರು. ಇನ್ನೂ ಕಾಂಗ್ರೆಸ್‌ ಕಳೆದ ಹದಿನೈದು ದಿವಸದಿಂದ ಮೂರನೇ ಸಿಎಂ ಅನ್ನೋ ಹೇಳಿಕೆಯನ್ನು ನೀಡುತ್ತಿದ್ದು, ಇದು ಬಿಜೆಪಿಯಲ್ಲಿ ತಳಮಳ ಉಂಟು ಮಾಡಿದೆ.

ಕಟೀಲ್‌ ಅವರ ಬದಲಾವಣೆಗೆ ಸಂಬಂಧಪಟ್ಟಂತೆ ಅದು ಸಹಜ ಬದಲಾವಣೆಯಾಗಿದ್ದು, ಆ ಬಗ್ಗೆ ಹೈಕಮಾಂಡ್‌ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಅಂತ ಅವರು ಇದೇ ವೇಳೇ ಹೇಳಿದರು. ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಇಲ್ಲಿಗೆ ನಿಲ್ಲ ಬೇಕು ಅಂತ ಹೇಳಿದರು.

Share.
Exit mobile version