ಬೆಂಗಳೂರು : ಸಹಕಾರ ಬ್ಯಾಂಕ್ ಗಳ ಕೃಷಿ ಸಾಲ ಮನ್ನಾ ಮಾಡುವ ಕುರಿತು ವಿಚಾರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟನೆ ನೀಡಿದ್ದು, ಕೃಷಿ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ಸಿ.ಟಿ. ರವಿ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎನ್. ರಾಜಣ್ಣ, ಸಹಕಾರ ಬ್ಯಾಮಕುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲ ಮನ್ನಾ ಮಾಡುವ ಯಾವುದೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ರೈತರು ಠೇವಣಿ ಹಣದ ಮೇಲೆ ಸಹಕಾರ ಬ್ಯಾಂಕುಗಳು ನಡೆಯುತ್ತವೆ. ಹೀಗಾಗಿರುವಾಗ ಸಾಲ ಮನ್ನಾ ಮಾಡುವ ಉದ್ದೇಶವಿಲ್ಲ ಎಂದರು.
ಇನ್ನು ಪ್ರಸಕ್ತ ಸಾಲಿನಲಿ 35ಲಕ್ಷ ರೈತರಿಗೆ 25 ಸಾಔಿರ ಕೋಟಿ ರೂ. ಅಲ್ಪಾವಧಿ ಹಾಗೂ 90 ಸಾವಿರ ರೈತರಿಗೆ 2 ಸಾವಿರ ಕೋಟಿ ರೂ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ನೀಡಲಾಗುವುದು ಎಂದು ತಿಳಿಸಿದ್ದಾರೆ.