ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಆಷಾಢ ಮಾಸದ ಕೊನೆಯ ಅಮಾವಾಸ್ಯೆ ಅನ್ನು ಭೀಮಾನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇಂದು ಭೀಮಾನ ಅಮಾವಾಸ್ಯೆ ಆಚರಣೆ. ಎಲ್ಲೆಡೆ ಗಂಡನ ಪಾದವನ್ನು ಪೂಜೆ ಮಾಡುತ್ತಾರೆ. ಇಂದಿನ ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದೂ ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ

 

ಈ ವ್ರತವನ್ನು ಮಾಡುವುದರಿಂದ ಕನ್ಯೆಯರು ಉತ್ತಮ ಗುಣವುಳ್ಳ ಪತಿಯನ್ನೂ, ಮತ್ತು ಸಹೋದರರು ಕ್ಷೇಮವನ್ನೂ ಮತ್ತು ವಿವಾಹಿತ ಸ್ತ್ರೀಯರು ಸೌಭಾಗ್ಯವನ್ನು ಪಡೆಯುತ್ತಾರೆ. ಈ ವ್ರತವನ್ನು ಮನೋ ನಿಯಾಮಕರಾದ ಪಾರ್ವತಿ ಮತ್ತು ರುದ್ರದೇವರ ಅನುಗ್ರಹ ಪ್ರಾಪ್ತಿಗಾಗಿ ಆಚರಿಸುತ್ತಾರೆ. ಮದುವೆಯಾದ ಮೊದಲ ಒಂಭತ್ತು ವರ್ಷ ಈ ವ್ರತವನ್ನು ಹೆಣ್ಣುಮಕ್ಕಳು ಮಾಡುತ್ತಾರೆ. ಮಣ್ಣಿನಿಂದ ಲಿಂಗಾಕಾರದಲ್ಲಿ ವಿಗ್ರಹ ಮಾಡಿ, ಅದರಲ್ಲಿ ಪಾರ್ವತೀ ಪರಮೇಶ್ವರನನ್ನು ಆಹ್ವಾನಿಸಿ ಪೂಜಿಸುತ್ತಾರೆ. ಈ ಕಡುಬಿನಲ್ಲಿ ಚಿಲ್ಲರೆಯನ್ನು ಇಟ್ಟು ಅದನ್ನು ಹೊಸ್ತಿಲ ಎರಡೂ ಬದಿಯಲ್ಲಿ ವಿಳ್ಳೆದೆಲೆ ಮೇಲಿಟ್ಟು ಹರಿದ್ರಾ ಕುಂಕುಮದಿಂದ ಪೂಜಿಸಿ ಮನೆಯ ಗಂಡುಮಕ್ಕಳು ಕೈಲಿ ಅ ಕಡುಬನ್ನು ಅವರ ಮಂಡಿಯೂರಿ ಮೊಣಕೈನಿಂದ ಒಡೆಯಬೇಕು. ಇದನ್ನು “ಭಂಡಾರ ಒಡೆಯುವುದು” ಎನ್ನುತ್ತಾರೆ.

 

ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ

“ಭೀಮ” ಕೂಡ ರುದ್ರದೇವರ ಹಲವಾರು ಹೆಸರುಗಳಲ್ಲಿ ಒಂದು. ಈ ಹಬ್ಬಕ್ಕೆ ಭೀಮನೆಂಬ ರುದ್ರದೇವರ ಹೆಸರಿನಿಂದ ಪೂಜಿಸುತ್ತಾರೆ.
ಈ ಹಿಂದೆ ಸೌರಾಷ್ಟ್ರ ದೇಶದಲ್ಲಿ “ವಜ್ರಬಾಹು” ಎಂಬ ಉತ್ತಮ ಆಡಳಿತಗಾರ ರಾಜನಿದ್ದನು. ಅವನಿಗೆ ಸುಂದರನೂ, ಗುಣವಂತನೂ ಆದ ಜಯಶೀಲನೆಂಬ ಮಗನಿದ್ದನು. ಆದರೆ ಇನ್ನೂ ವಿವಾಹವೂ ಆಗದ ಪುತ್ರನು ಮೃತನಾಗಲು, ರಾಜನು ತನ್ನ ಪಿತೃಗಳಿಗೆ ಯಾರು ತಿಲೋದಕವನ್ನು ಕೊಡುತ್ತಾರೆ ಎಂದು ಆಘಾತದಿಂದ , ತನ್ನ ಮಗನಿಗೆ ವಿವಾಹ ಮಾಡಿದರೆ ಆ ಹೆಣ್ಣಿನ ಮೂಲಕ ಪಿತೃಗಳಿಗೆ ಸದ್ಗತಿ ನೀಡಬಹುದೆಂದು ಯೋಚಿಸಿದನು. ಯಾರು ತನ್ನ ಮೃತ ಪುತ್ರನ ವಿವಾಹಕ್ಕೆ ಹೆಣ್ಣು ಕೊಡುತ್ತಾರೋ ಅವರಿಗೆ ಯಥೇಶ್ಚ ದಾನ ಕೊಡುವುದಾಗಿ ಘೋಷಿಸುತ್ತಾನೆ. ಅದೇ ಊರಿನಲ್ಲಿದ್ದ ಒಬ್ಬ ಬಡ ಸುಸಂಸ್ಕೃತ ಬ್ರಾಹ್ಮಣನು ತನ್ನ ಬಡತನದಿಂದ ದೂರಬರಲು ನಿರ್ಧರಿಸಿ, ತನ್ನ ಮಗಳನ್ನು ಆ ಮೃತ ರಾಜಕುಮಾರನಿಗೆ ಕೊಟ್ಟು ವಿವಾಹ ಮಾಡಿದನು. ತನಗೆ ಬರಬೇಕಾದ ಧನಧಾನ್ಯಾದಿಗಳನ್ನು ಆ ಬ್ರಾಹ್ಮಣ ಪಡೆದುಕೊಳ್ಳುತ್ತಾನೆ.

ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ

 

ವಿವಾಹದ ನಂತರ ರಾಜ, ವಧು ಮತ್ತು ಸೈನಿಕರು ರಾಜಕುಮಾರನ ಹೆಣವನ್ನು ಸುಡಲು ಸ್ಮಶಾನಕ್ಕೆ ಕರೆದುಕೊಂಡು ಬರುತ್ತಾರೆ. ಕನ್ಯೆಯಾದರೋ ಸಕಲಾಭರಣಗಳಿಂದ ಅಲಂಕೃತಳಾಗಿ ಹರಿದ್ರಾ ಕುಂಕುಮ ಶೋಭಿತಳಾಗಿ ಪಾರ್ವತೀ ಪರಮೇಶ್ವರನನ್ನು ಧ್ಯಾನಿಸುತ್ತಾ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಳು. ಆದರೆ ದೈವಲೀಲೆಯಿಂದ ಆ ಸಂದರ್ಭದಲ್ಲಿ ಭಾರೀ ಮಳೆಯಾಗಿ, ಅಗ್ನಿ ಆರಿಹೋಯಿತು. ಸೂರ್ಯಾಸ್ತವಾಗಿ ಗಾಢ ಕತ್ತಲೆ ಆವರಿಸಿತು.ಮಳೆ ಮಾತ್ರ ನಿಲ್ಲಲಿಲ್ಲ.ಹುಡುಗಿಯು ಈಗ ರಾಜಕುಮಾರಿಯಾಗಿದ್ದರಿಂದ ರಾಜಕುಮಾರನ ತಂದೆಯು ಆಕೆಗೆ ಹೆಣವನ್ನು ಬಿಟ್ಟು ಬರುವಂತೆ ತಿಳಿಸುತ್ತಾನೆ. ಆದರೆ ಪತಿಯ ಹೆಣವನ್ನು ಬಿಟ್ಟು ತಾನು ಬರುವುದಿಲ್ಲವೆಂದು ಹುಡುಗಿ ಹೇಳುತ್ತಾಳೆ. ರಾಜ ಮತ್ತವನ ಪರಿವಾರದವರು ಮಳೆಯಿಂದ ತಪ್ಪಿಸಿಕೊಳ್ಳಲು ಹುಡುಗಿಯನ್ನು ಬಿಟ್ಟು ಓಡುತ್ತಾರೆ. ರಾಜಕುಮಾರನ ಶವವನ್ನು ನೋಡುತ್ತಾ ಆಕೆ ಮನಸ್ಸಿನಲ್ಲಿಯೇ ನೊಂದು, ಗಾಢ ಕತ್ತಲೆಗೆ ಹೆದರಿ, ಪಾರ್ವತಿ ಪರಮೇಶ್ವರನನ್ನು ಪ್ರಾರ್ಥಿಸುತ್ತಾಳೆ. ” ಪರಮೇಶ್ವರ ಹಿಂದೆ ಮಾರ್ಕಂಡೇಯನಿಗೆ ಚಿರಂಜೀವಿತ್ವ,, ಅಗ್ನಿ ಮನ್ಮಥರಿಗೂ ಮರುಜನ್ಮ, ಶ್ವೇತವಾಹನನಿಗೂ ಚ್ಯವನ ಋಷಿಗಳಿಗೂ ದೀರ್ಘಾಯುಷ್ಯ ನೀಡಿರುವೆ. ನಾನು ಏನು ತಪ್ಪು ಮಾಡಿದ್ದೇನೆ? ನನಗ್ಯಾಕೆ ಈ ಘೋರ ಶಿಕ್ಷೆ ? ಕಾಪಾಡು” ಎಂದು ಪ್ರಾರ್ಥಿಸಿದಳು. ಭಕ್ತವತ್ಸಲನಾದ ಶಿವನು ಪಾರ್ವತಿಯೊಂದಿಗೆ ಅಲ್ಲಿ ಪ್ರತ್ಯಕ್ಷರಾದಾಗ “ನನಗೆ ಸೌಭಾಗ್ಯ ಸಂಪತ್ತು ನೀಡು” ಎಂದು ಪ್ರಾರ್ಥಿಸುತ್ತಾಳೆ.ಹೀಗಾಗಿ ಇದನ್ನು ಎಲ್ಲರೂ ಭೀಮಾನ ಅಮಾವಾಸ್ಯೆಯನ್ನು ಆಚಣೆ ಮಾಡಿಕೊಂಡು ಬರುತ್ತಿದ್ದಾರೆ.

Share.
Exit mobile version