ಬೆಂಗಳೂರು: ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪ ಪ್ರಕರಣದಲ್ಲಿ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಿದ್ದಲಿಂಗಯ್ಯ ಹಾಗೂ ಪ್ರೇಮಾ ಕುಮಾರಿ ಬಂಧಿತ ದಂಪತಿಯಾಗಿದ್ದರು, ಪ್ರಕೃತಿನಗರದಲ್ಲಿ ಕೆಲವು ವರ್ಷಗಳಿಂದ ಶ್ರೀ ಸಾಯಿಲಕ್ಷ್ಮೀ ಕೃಪೆ ಚಿಟ್ (ರಿ) ಹೆಸರಿನಲ್ಲಿ ಬಂಧಿತ ದಂಪತಿ ಚೀಟಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ತ್ತೀಚಿಗೆ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದು ಬ್ಯಾಡರಹಳ್ಳಿ ಠಾಣೆಗೆ ಈ ಬಗ್ಗೆ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು, ಇದೀಗ ಪೊಲೀಸರು ಆರೋಪಿ ದಂಪತಿಯ ವಿಚಾರಣೆ ನಡೆಸುತ್ತಿದ್ದಾರೆ.

Share.
Exit mobile version