ಬೆಂಗಳೂರು: ಮನೆ ಬಿಟ್ಟು ಬಂದಿದ್ದಂತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು, ಪೊಲೀಸ್ ಪೇದೆಯೊಬ್ಬ ಅತ್ಯಾಚಾರವೆಸಗಿ, ಹೀನಕೃತ್ಯ ನಡೆಸಿರೋ ಘಟನೆ, ನಗರದಲ್ಲಿ ನಡೆದಿದೆ.

ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆ ( KP Agrahara Police Station ) ವ್ಯಾಪ್ತಿಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದಂತ ಬಾಲಕಿ, ಚಾಮರಾಜನಗರದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣ, ಜುಲೈ.26ರಂದು ಮನೆಯನ್ನು ಬಿಟ್ಟು ಬಂದಿದ್ದಳು. ಅಲ್ಲಿಂದ ವಿಜಯನಗರಕ್ಕೆ ಹೋಗಿದ್ದಂತ ಬಾಲಕಿ, ಪಾರ್ಕ್ ಬಳಿಯಲ್ಲಿ ಓಡಾಡುತ್ತಿದ್ದಳು.

ಗಮನಿಸಿ: ಮತದಾರರ ಪಟ್ಟಿ ತಯಾರಿಕೆ, ಪರಿಷ್ಕರಣೆ, ಅಗತ್ಯ ಬದಲಾವಣೆ ಪ್ರಕ್ರಿಯೆ ಆರಂಭ

ಗೋವಿಂದರಾಜನಗರ ಠಾಣೆಯ ಪೇದೆಯಾಗಿದ್ದಂತ ಪವನ್ ದ್ಯಾವಣ್ಣನವರ್, ಮಫ್ತಿಯಲ್ಲಿದ್ದ ವೇಳೆಯಲ್ಲಿ ಬಾಲಕಿ ಪಾರ್ಕ್ ಬಳಿಯಲ್ಲಿ ಓಡಾಡುವುದನ್ನು ಗಮನಿಸಿದ್ದರು. ಬಳಿಗೆ ತೆರಳಿ ವಿಷಯ ತಿಳಿದು, ಬಸ್ ನಿಲ್ದಾಣಕ್ಕೆ ಕರೆದೊಯ್ಯೋದಾಗಿ ಬೈಕ್ ನಲ್ಲಿ ಹತ್ತಿಸಿಕೊಂಡು ತೆರಳಿದ್ದರು. ಮಾರ್ಗಮಧ್ಯೆ ಈಗ ರಾತ್ರಿಯಾಗುತ್ತಿದೆ. ಇಷ್ಟು ಹೊತ್ತಿನಲ್ಲಿ ಬೇಡವೆಂದು ಪುಸಲಾಯಿಸಿ, ತಮ್ಮ ರೂಂಗೆ ಕರೆದೊಯ್ದಿದ್ದರು.

ತನ್ನ ರೂಂಗೆ ಕರೆದುಕೊಂಡು ಹೋಗಿದ್ದಂತ ಪೇದೆ ಪವನ್ ರಾತ್ರಿ ಅನುಚಿಕವಾಗಿ ಬಾಲಕಿಯೊಂದಿಗೆ ವರ್ತಿಸಿದ್ದಲ್ಲದೇ, ಅತ್ಯಾಚಾರ ಕೂಡ ಎಸಗಿದ್ದರು. ಆ ಬಳಿಕ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟು, ಬಸ್ ಚಾರ್ಜ್ ಗೆ ಹಣ ನೀಡಿ, ಚಾಮರಾಜನಗರಕ್ಕೆ ಕಳುಹಿಸಿದ್ದರು.

BREAKING NEWS: ‘ಜೆಡಿಎಸ್’ನ ಮತ್ತೊಂದು ವಿಕೆಟ್ ಪತನ: ‘ಅಗಿಲೆ ಯೋಗೀಶ್’ ಗುಡ್ ಬೈ

ಬಾಲಕಿ ತಾನು ಪ್ರೀತಿಸುತ್ತಿದ್ದಂತ ಯುವಕನ ಮನೆಗೆ ತೆರಳಿದಂತ ವೇಳೆ, ಅಪ್ರಾಪ್ತೆಯಾಗಿದ್ದ ಕಾರಣ, ಯುವಕನ ಪೋಷಕರು, ಜುಲೈ.27ರಂದು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದರು. ಅವರು ಕೆ.ಪಿ ಅಗ್ರಹಾರ ಠಾಣೆಗೆ ಮಾಹಿತಿ ನೀಡಿದ ಕಾರಣ, ಅಲ್ಲಿಗೆ ಕಳುಹಿಸಿಕೊಟ್ಟಿದ್ದರು.

ಈ ಬಳಿಕ, ಬಾಲಕಿ ಅಪಹರಣ ಪ್ರಕರಣ ದಾಖಲಾಗಿದ್ದ ಕಾರಣ, ಕೆಪಿ ಅಗ್ರಹಾರ ಠಾಣೆಯ ಪೊಲೀಸರು, ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಿದ್ದರು. ಈ ವೇಳೆಯಲ್ಲಿ ತನ್ಮ ಮೇಲೆ ಕಾನ್ ಸ್ಟೇಬಲ್ ಅತ್ಯಾಚಾರ ಎಸಗಿರೋ ಮಾಹಿತಿಯನ್ನು ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದರು. ಈ ಹಿನ್ನಲೆಯಲ್ಲಿ, ಪೇದೆ ಪವನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿತ್ತು. ಆತನನ್ನು ಸೇವೆಯಿಂದ ಅಮಾನತು ಕೂಡ ಮಾಡಲಾಗಿದೆ.

BREAKING NEWS: ಡಿಎಚ್ಎಫ್ಎಲ್ ಹಗರಣ: ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆಯಲ್ಲಿದ್ದ ಹೆಲಿಕಾಪ್ಟರ್ ವಶಪಡಿಸಿಕೊಂಡ ಸಿಬಿಐ | DHFL scam case

Share.
Exit mobile version