ಬೆಂಗಳೂರು : ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮಡಿವಾಳ ಠಾಣೆಯ ಕಾನ್ಸ್ಟೇಬಲ್ ಶಿವರಾಜ್ (29) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತವಾಗುತ್ತಿದೆ.

ಹೌದು ಜೂನ್ 26ರಂದು ಮನೆಯಿಂದ ಕಾನ್ಸ್ಟೇಬಲ್ ಶಿವರಾಜ್ ನಾಪತ್ತೆಯಾಗಿದ್ದ ಎನ್ನಲಾಗಿದೆ. ನಂತರ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಮೂರು ತಿಂಗಳ ಹಿಂದೆ ಶಿವರಾಜ್ ದಾವಣಗೆರೆ ಮೂಲದ ವಾಣಿ ವಿವಾಹವಾಗಿದ್ದ. ನಂತರ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಶಿವರಾಜ್ ವಾಣಿ ದೂರವಾಗಿದ್ದರು.

ಇದಾದ ಬಳಿಕ ಪತಿ ಶಿವರಾಜ್ ಮತ್ತು ಕುಟುಂಬದ ವಿರುದ್ಧ ಪತ್ನಿ ವಾಣಿ ದೂರು ನೀಡಿದ್ದಳು. ದಾವಣಗೆರೆಯಲ್ಲಿ ವರದಕ್ಷಿಣೆ ಕಿರುಕುಳ ಬಗ್ಗೆ ವಾಣಿ ದೂರು ನೀಡಿದ್ದಳು. ದಾವಣಗೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಶಿವರಾಜ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

Share.
Exit mobile version