ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಂತ ಪುಂಡನನ್ನು ಬಂಧಿಸೋದಕ್ಕೆ ತೆರಳಿದ್ದಂತ ಪೊಲೀಸರ ಮೇಲೆಯೇ ಗಾಂಜಾ ಮತ್ತಿನಲ್ಲಿ ಲಾಂಗ್ ಬೀಸಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿರೋ ಘಟನೆ ಇಂದು ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಪ್ರಕರಣಗಳಲ್ಲಿ ವರುಣ್ ಆಲಿಯಾಸ್ ಕೆಂಚ ಎಂಬಾತ ಇರುವಂತ ಖಚಿತ ಮಾಹಿತಿ ಆನೇಕಲ್ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಪ್ಪ ಹಾಗೂ ಪಿಸಿ ಶಂಕರ್ ಜೊತೆಗೆ ತೆರಳಿ, ಬಂಧಿಸಿ ಕರೆತಂದು ವಿಚಾರಣೆ ನಡೆಸೋದಕ್ಕೆ ತೆರಳಿದ್ದರು.

ಪೊಲೀಸರ ಬಂಧನದ ಸುದ್ದಿ ತಿಳಿದಂತ ಆರೋಪಿ ವರುಣ್, ಬಂಧನಕ್ಕೆ ತೆರಳಿದಂತ ಪೊಲೀಸ್ ಪೇದೆ ಶಂಕರ್ ಮೇಲೆ ಮಚ್ಚು ಬೀಸಿದ್ದಾನೆ. ಈ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ವರುಣ್ ಕಾಲಿಗೆ ಗುಂಡೇಟನ್ನು ಪಿಐ ಚಂದ್ರಪ್ಪ ನೀಡಿದ್ದಾರೆ. ಈ ಮೂಲಕ ಆತನನ್ನು ಬಂಧಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

BIGG NEWS : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ : ಶಾಸಕ ಸಿ.ಟಿ. ರವಿ ಹೇಳಿದ್ದೇನು ಗೊತ್ತಾ?

ತನ್ನ ಪ್ರಾಣ ಸ್ನೇಹಿತ ಹೊಸ ಪಕ್ಷ ರಚನೆ ಬಗ್ಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದೇನು ಗೊತ್ತಾ?

Share.
Exit mobile version