ಬೆಂಗಳೂರು : ಆತ ಒಬ್ಬ ಪಾಗಲ್ ಪ್ರೇಮಿ ಆಗಿದ್ದ ವಿವಾಹಿತೆಯನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಆದರೆ ವಿವಾಹಿತೆ ಮದುವೆ ಆಗುವುದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕಪಿತಗೊಂಡ ಪಾಗಲ್ ಪ್ರೇಮಿ ವಿವಾಹಿತೆ ಮನೆಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ನಡೆದಿದೆ.

ಹೌದು ವಿವಾಹಿತೆಯನ್ನು ಮದುವೆಯಾಗುವಂತೆ ಅರ್ಬಾಜ್ ಎನ್ನುವ ಪಾಗಲ್ ಪ್ರೇಮಿ ಪೀಡಿಸುತ್ತಿದ್ದ. ಆದರೆ ವಿವಾಹಿತೆ ಮದುವೆಯಾಗಲ್ಲ ಎಂದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ್ದಾನೆ.ಈ ಒಂದು ಘಟನೆ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಸಾರಾಯಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯ ಮನೆಗೆ ಪಾಗಲ್ ಪ್ರೇಮಿ ಅರ್ಬಾಜ್ ಎನ್ನುವ ವ್ಯಕ್ತಿ ಬೆಂಕಿ ಇಟ್ಟಿದ್ದಾನೆ. ಅರ್ಬಜ್ ಮಹಿಳೆಯ ದೂರದ ಸಂಬಂಧಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅರ್ಬಾಸ್ ಮದುವೆಯಾಗು ಎಂದು ಮಹಿಳೆಯ ಹಿಂದೆ ಬಿದ್ದಿದ್ದಾನೆ. ಈ ಬಗ್ಗೆ ಎರಡು ಕುಟುಂಬದ ಹಿರಿಯರು ಆತನಿಗೆ ಬುದ್ಧಿ ಹೇಳಿದ್ದರು.ಹಿರಿಯರ ಬುದ್ಧಿಮಾತಿಗೂ ಅರ್ಬಾಜ್ ಬಗ್ಗದೇ ಈ ಒಂದು ದುಷ್ಕೃತ್ಯ ಎಸಗಿದ್ದಾನೆ.

ಮುಂಜಾನೆ 4:00 ಸುಮಾರಿಗೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿ ಯಾರು ಇಲ್ಲದಿದ್ದಕ್ಕೆ ಭಾರಿ ಅನಾಹುತ ಒಂದು ತಪ್ಪಿದೆ. ಬೆಂಕಿ ಇಟ್ಟಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ಕೇಸ್ ದಾಖಲಿಸಿಕೊಂಡು ಪೊಲೀಸರು ಇದೀಗ ಅರ್ಬಜ್ ನನ್ನು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share.
Exit mobile version