ಬೆಂಗಳೂರು: ಇಲ್ಲಿನ ಆನೇಕಲ್ ಬಳಿಯ ಚಿನ್ನಯ್ಯಪಾಳ್ಯದಲ್ಲಿ ಇಂದು ಭೀಕರ ಅಪಘಾತ ( Accident ) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿದೆ. ಈ ಪರಿಣಾಮ ಕಾರಿನಲ್ಲಿದ್ದಂತ 7 ವಿದ್ಯಾರ್ಥಿಗಳಲ್ಲಿ ಐವರು ಈಜಿ ದಡ ಸೇರಿದ್ದರೇ, ಮತ್ತೆ ಇಬ್ಬರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.

BIGG NEWS: ‘ಬಿಜೆಪಿ ರಾಜ್ಯಾಧ್ಯಕ್ಷ, ಸಚಿವ ಬಿಎ ಬಸವರಾಜ್’ರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ಧ್ವಜ ತಲೆಕೆಳಾಗಿಸಿ ಧರಿಸಿದ್ದಕ್ಕೆ ಕಾಂಗ್ರೆಸ್ ಕಿಡಿ

ಬೆಂಗಳೂರಿನ ಆನೇಕಲ್ ಬಳಿಯಲ್ಲಿನ ಚಿನ್ನಯ್ಯಪಾಳ್ಯದ ಭುಜಂಗದಾಸಯ್ಯನ ಕೆರೆಯ ಬಳಿಯಲ್ಲಿ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳು ಎಸ್ ಯುವಿ ಕಾರಿನಲ್ಲಿ 7 ಮಂದಿ ತೆರಳುತ್ತಿದ್ದರು ಎನ್ನಲಾಗಿದೆ. ಅತಿವೇಗದ ಚಾಲನೆ ಹಾಗೂ ಕುಡಿದ ಮತ್ತಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಭುಜಂಗದಾಸಯ್ಯನ ಕೆರೆಗೆ ಹಾರಿ ಬಿದ್ದಿದೆ.

BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಕಾರಿನಲ್ಲಿ ಇದ್ದಂತ 7 ಮಂದಿ ವಿದ್ಯಾರ್ಥಿಗಳಲ್ಲಿ, ಐವರು ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ. ಇನ್ನುಳಿದಂತ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಬನ್ನೇರುಘಟ್ಟ ಠಾಣೆಯ ಪೊಲೀಸರು, ಕೆರೆಗೆ ಬಿದ್ದಂತ ಕಾರನ್ನು ಜೆಸಿಬಿ ಬಳಸಿ ಮೇಲೆತ್ತಿದ್ದಾರೆ. ಅಲ್ಲದೇ ನಾಪತ್ತೆಯಾಗಿರುವಂತ ಇಬ್ಬರು ವಿದ್ಯಾರ್ಥಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

BIGG NEWS: ಆ.28ಕ್ಕೆ ಸೂಪರ್‌ಟೆಕ್‌ನ ಅವಳಿ ಟವರ್‌ ನೆಲಸಮ; ಅವಧಿ ವಿಸ್ತರಿಸಿದ ಸುಪ್ರೀಂಕೋರ್ಟ್‌

Share.
Exit mobile version