ಬೆಳಗಾವಿ: ಬೈಕ್ ನಲ್ಲಿ ತೆರಳುತ್ತಿದ್ದಂತ ವ್ಯಕ್ತಿಯನ್ನು ಅಡ್ಡಗಟ್ಟಿರುವಂತ ದುಷ್ಕರ್ಮಿಗಳು, ರುಂಡವನ್ನು ಕತ್ತರಿಸಿರುವಂತ ಭೀಕರ ಘಟನೆ ಬೆಳಗಾವಿಯ ತಾರಿಹಾಳ್ ಕ್ರಾಸ್ ಬಳಿಯಲ್ಲಿ ನಡೆದಿದೆ. ಈ ಘಟನೆಯಿಂದ ಬೆಳಗಾವಿಯ ಜನತೆಯೇ ಬೆಚ್ಚಿ ಬೀಳುವಂತೆ ಆಗಿದೆ.

BREAKING NEWS: ಕೋವಿಡ್ ಲಸಿಕೆ ತಂತ್ರಜ್ಞಾನ ನಕಲು ಮಾಡಿದ್ದಕ್ಕಾಗಿ ಫೈಜರ್, ಬಯೋಎನ್ಟೆಕ್ ವಿರುದ್ಧ ಮಾಡೆರ್ನಾ ಮೊಕದ್ದಮೆ | Covid-19 vaccine

ಬೆಳಗಾವಿ ಜಿಲ್ಲೆಯ ತಾರಿಹಾಳ ಕ್ರಾಸ್ ಬಳಿಯ ಮುನವಳ್ಳಿ ಬಳಿಯಲ್ಲಿ, ಬೈಕ್ ಮೇಲೆ ಗದಗಯ್ಯ ಹಿರೇಮಠ(40) ಎಂಬುವರು ಹೋಗುತ್ತಿದ್ದರು. ಅವರನ್ನು ತಾರಿಹಾಳ ಕ್ರಾಸ್ ಬಳಿಯಲ್ಲಿ ತಡೆದಿರುವಂತ ದುಷ್ಕರ್ಮಿಗಳು, ಅವರ ರುಂಡವನ್ನು ಕತ್ತರಿಸಿದ್ದಾರೆ.

BIG NEWS: ಮತ್ತೆ ಶುರುವಾದ ಲೋಕಾಯುಕ್ತ ಕಾರ್ಯಾಚರಣೆ: ಭ್ರಷ್ಟಾಚಾರ ಸಂಬಂಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸುವಂತೆ ಎಡಿಜಿಪಿ ಆದೇಶ

ಬೈಕ್ ಮೇಲೆ ರುಂಡ ಕತ್ತರಿಸಿದಂತ ಮೃತ ದೇಹವನ್ನು ಕಂಡಂತ ಜನರು, ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಈ ಸಂಬಂಧ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

BIGG BREAKING NEWS: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ10,256 ಹೊಸ ಪ್ರಕರಣಗಳು ಪತ್ತೆ, 68 ಸಾವು

Share.
Exit mobile version