ಬೆಂಗಳೂರು : ಬೆಂಗಳೂರಿನಲ್ಲಿ ರಣಭೀಕರ ಹತ್ಯೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ತಲೆ ಮೇಲೆ 20 ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ಕೆಪಿ ಅಗ್ರಹಾರ ಠಾಣೆ ಪೊಲೀಸರು 6 ಮಂದಿಯನ್ನು ಜೈಲಿಗಟ್ಟಿದ್ದಾರೆ. ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಕಾಶೀನಾಥ್, ಚನ್ನಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಹೆಣ್ಣಿನ ವಿಚಾರವಾಗಿ ಜಮಖಂಡಿ ಮೂಲದ ಮಂಜುನಾಥ್ ನನ್ನು ಮೂವರು ಮಹಿಳೆಯರು ಸೇರಿದಂತೆ 6 ಜನರ ತಂಡ ನಡು ರಸ್ತೆಯಲ್ಲೇ 20 ಕ್ಕೂ ಹೆಚ್ಚು ಬಾರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ನನ್ನು ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಕೆ.ಪಿ. ಅಗ್ರಹಾರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Ayushman Bharat Card: ಡಿ.8ರಂದು 5.09 ಕೋಟಿ ಜನರಿಗೆ ‘ಆಯುಷ್ಮಾನ್ ಕಾರ್ಡ್’ ವಿತರಣೆ: ದೇಶದ ಯಾವುದೇ ‘ನೋಂದಾಯಿತ ಆಸ್ಪತ್ರೆ’ಗಳಲ್ಲಿ ಚಿಕಿತ್ಸೆ ಲಭ್ಯ

ರಾಜ್ಯದ ಶಿಕ್ಷಣ ಸಚಿವರ ಬದಲಾವಣೆಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಆಗ್ರಹ

Share.
Exit mobile version