ಮುಂಬೈ: ತೆರೆದ ಮ್ಯಾನ್ ಹೋಲ್ ಗಳಿಂದ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್, ತೆರೆದ ಮ್ಯಾನ್ ಹೋಲ್ ಗಳಿಂದ ಯಾವುದೇ ಸಾವು ಸಂಭವಿಸಿದರೆ ಬೃಹನ್ಮುಂಬೈ ಮುಂಬೈ ಕಾರ್ಪೊರೇಷನ್ (ಬಿಎಂಸಿ) ಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಗಳವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ವಿಭಾಗೀಯ ಪೀಠವು, ಒಬ್ಬ ವ್ಯಕ್ತಿಯು ಮ್ಯಾನ್ ಹೋಲ್ ಗೆ ಬಿದ್ದು ಸಾವನ್ನಪ್ಪಿದರೆ, ಪರಿಹಾರ ಕೋರಿ ಸಿವಿಲ್ ದಾವೆ ಹೂಡುವಂತೆ ನ್ಯಾಯಾಲಯವು ನೊಂದ ವ್ಯಕ್ತಿಯನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದೇ ವೇಳೇ ನ್ಯಾಯಪೀಠ “ನೀವು (ಬಿಎಂಸಿ) ಕೆಲಸ ಮಾಡುತ್ತಿದ್ದೀರಿ ಆದರೆ ಯಾರಿಗಾದರೂ ಹಾನಿಯಾದರೆ, ನಾವು ನಿಮ್ಮನ್ನು ಜವಾಬ್ದಾರರನ್ನಾಗಿ ಮಾಡುತ್ತೇವೆ. ನಾವು ಬಿಎಂಸಿಯನ್ನು ಶ್ಲಾಘಿಸುತ್ತಿದ್ದೇವೆ ಆದರೆ ಮ್ಯಾನ್ ಹೋಲ್ ತೆರೆದರೆ ಮತ್ತು ಯಾರಾದರೂ ಕೆಳಗೆ ಬಿದ್ದರೆ ಏನಾಗುತ್ತದೆ?” ಎಂದು ಸಿಜೆ ದತ್ತಾ ಪ್ರಶ್ನಿಸಿದ್ದಾರೆ. “ಅಂತಹ ಪರಿಸ್ಥಿತಿಯಲ್ಲಿ, ಸಿವಿಲ್ ದಾವೆಯನ್ನು ಪ್ರಾರಂಭಿಸುವಂತೆ ನಾವು ಪೀಡಿತ ವ್ಯಕ್ತಿಯನ್ನು ಕೇಳುವುದಿಲ್ಲ … ನಿಮ್ಮ ಅಧಿಕಾರಿಗಳು ಜವಾಬ್ದಾರರು ಎಂದು ನಾವು ಹೇಳುತ್ತೇವೆ” ಎಂದು ಅವರು ಹೇಳಿದರು.

Share.
Exit mobile version