ಶ್ರೀರಂಗಪಟ್ಟಣ: ತಾಲೂಕಿನ ಗೌರಿಪುರ ಗ್ರಾಮದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಮಿಳುನಾಡು ಮೂಲದ ಎಲುಮಲೈ (60) ಎಂದು ಗುರುತಿಸಲಾಗಿದೆ. ಬಿಯರ್ ಬಾಟಲಿಗಳನ್ನು ತುಂಬಿದ್ದ ಟ್ರಕ್ ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿತ್ತು. ಬಿಯರ್ ತುಂಬಿದ ಲಾರಿ ಎಂದು ತಿಳಿದ ತಕ್ಷಣ ಸ್ಥಳೀಯರು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಾಟಲಿಗಳನ್ನು ತೆಗೆದುಕೊಂಡು ಓಡಿ ಹೋದರು. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Author: kannadanewsnow
ಬೆಂಗಳೂರು : ಸಿಲಿಕಾನ್ ಸಿಟಿಯ ಆರ್ ಆರ್ ನಗರದಲ್ಲಿ ಮೂರುವರೆ ವರ್ಷದ ಮಗುವಿನ ಕುತ್ತಿಗೆಗೆ ಶಾಲ್ ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/food-teeth-cleaning-health-tips/ ʻನನ್ನ ಸಾವಿಗೆ ಯಾರೂ ಕಾರಣರಲ್ಲʼ , ʻಸ್ವಾರಿ ಅಮ್ಮʼ ಎಂದು ಡೆತ್ ನೋಟ್ ಬರೆದಿಟ್ಟುಮಹಿಳೆ ಮೃತಪಟ್ಟಿದ್ದಾರೆ. ಮಗು ರಿಯಾಳನ್ನ ಕೊಂದ ತಾಯಿ ದೀಪಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ವಾರದಿಂದ ಜ್ವರ ಮತ್ತು ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. https://kannadanewsnow.com/kannada/food-teeth-cleaning-health-tips/ ದೀಪಾ ಅವರು RR ನಗರದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಜ್ವರ ಮತ್ತು ಹೊಟ್ಟೆ ನೋವು ಹಿನ್ನೆಲೆ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಡೆತ್ ನೋಟ್ ನಲ್ಲಿ” Nobody is responsible for it i just felt life is full of shits i am sorry mom and divya Love you shona ಎಂದು ದೀಪಾ ಬರೆದಿದ್ದಾರೆ. ಇನ್ನೂ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬದಲಾದ ಜೀವನ ಶೈಲಿಗಳಿಂದ ಹೊತ್ತು ಗೊತ್ತು ಇಲ್ಲದ ಸಂದರ್ಭದಲ್ಲಿ ಈಗಿನ ಕಾಲದಲ್ಲಿ ತಿನ್ನುವುದು ಹೆಚ್ಚಾಗಿದೆ. ಜತೆಗೆ ಈ ಮೊದಲು ಹೋಲಿಸಿದರೆ ನಾವು ತಿನ್ನುವ, ಕುಡಿಯುವ ವಿಚಾರದಲ್ಲಿ, ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಜನರಿಗೆ ಕೆಲಸದ ಒತ್ತಡದಲ್ಲಿ, ಸ್ನಾನ ಮಾಡಲು ಮತ್ತು ತಿನ್ನಲು ನಿರ್ದಿಷ್ಟ ಸಮಯವಿಲ್ಲ. ನಮ್ಮ ಕೆಲಸ ಅಥವಾ ದಿನಚರಿಗೆ ಅನುಗುಣವಾಗಿ ನಾವು ಆಹಾರವನ್ನು ತಿನ್ನುವುದು ಮತ್ತು ಸಮಯ ಸಿಕ್ಕಾಗ ಸ್ನಾನ ಮಾಡುತ್ತಾರೆ. https://kannadanewsnow.com/kannada/agnipath-scheme-army-navy-to-start-recruitment-today/ ಆದರೆ ನಮ್ಮ ಆಹಾರ ಮತ್ತು ಪಾನೀಯ ಮತ್ತು ಸ್ನಾನದ ನಡುವೆ ನೇರ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ, ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅನೇಕ ಬಾರಿ ನಮ್ಮ ಅಜ್ಜಿಯರು ಸ್ನಾನ ಮಾಡಿದ ನಂತರ ಊಟ ಮಾಡಿದ್ದಕ್ಕಾಗಿ ನಮ್ಮನ್ನು ಬೈಯುತ್ತಿದ್ದರು ಅಥವಾ ಹಬ್ಬದ ದಿನದಂದು ಸ್ನಾನ ಮಾಡಿದ ನಂತರವೇ ಆಹಾರವನ್ನು ತಿನ್ನಲು ನಮಗೆ ಹೇಳಲಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ ಎದ್ದೇಳುವುದು, ಸ್ನಾನ ಮಾಡುವುದು ಮತ್ತು ನಂತರ ತಿನ್ನುವುದು ನಿಮ್ಮ…
ದಕ್ಷಿಣಕನ್ನಡ : ಮದ್ರಸಾದಿಂದ ಹಿಂದಿರುಗುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನೋರ್ವ ಆರೋಪ ಮಾಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡಲು ಪ್ರಯತ್ನಿಸಿದ ಘಟನೆಯೊಂದು ಕೃಷ್ಣಾಪುರ ಕಾಟಿಪಳ್ಳದಲ್ಲಿ ನಡೆದಿದ್ದು, ಪೊಲೀಸರ ಕ್ಷಿಪ್ರ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬಿದಿದ್ದು, ಆ ಕೋಮು ಸಂಘರ್ಷ ಮಾಡುವ ಕಿಡಿಗೇಡಿಗಳ ಪ್ರಯತ್ನಕ್ಕೆ ತಡೆಬಿದ್ದಿದೆ. ಸೋಮವಾರ ಸಂಜೆ ಮದ್ರಸಕ್ಕೆ ತೆರಳಿ ಹಿಂದಿರುಗುತ್ತಿದ್ದ 13 ವರ್ಷದ ಬಾಲಕನೋರ್ವ ಕೇಸರಿ ಶಾಲು ಹಾಕಿದ ವ್ಯಕ್ತಿಗಳು ಹಲ್ಲೆ ನಡೆಸಿ,ಬಟ್ಟೆ ಹರಿದುಹಾಕಿದ್ದಾರ್ ಎಂದು ಆರೋಪಿಸಿದ್ದು ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ಬರಹಗಳು ಹರಿದಾಡಿ ,ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ವಿಚಾರಣೆ ಪ್ರಾರಂಭಿಸಿದ ಪೊಲೀಸರು ನಗರದ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದು,ಯಾವುದೇ ಸುಳಿವು ಪತ್ತೆಯಾಗದ ಕಾರಣ ಬಾಲಕನನ್ನು ಹೆತ್ತವರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ. ನೋಡಲು ಕಪ್ಪಾಗಿದ್ದೇನೆ,ಎಷ್ಟು…
ಶಿವಮೊಗ್ಗ : ಜಿಲ್ಲೆಯ ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್ ಉದ್ಘಾಟನೆ ವೇಳೆ ʻ ಸಂಸದ ರಾಘವೇಂದ್ರ ತಲೆ ಪೆಟ್ಟುʼ ಬಿದ್ದಿದ್ದು ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು. https://kannadanewsnow.com/kannada/sharad-pawar-receives-love-letter-from-income-tax-day-after-change-of-guard-in-maharashtra/ ಹೊಸ ಬೋಟ್ಗೆ ಅಳವಡಿಸಿದ್ದ ಮೊಳೆ ತಲೆಗೆ ತಾಗಿದ್ದು ಸಣ್ಣಪುಟ್ಟ ಗಾಯಗಳಾಗಿದೆ. ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು.ಬಳಿಕ ಮಾತನಾಡಿ ಸಂಸದ ರಾಘವೇಂದ್ರ ಅದಷ್ಟು ಬೇಗ ಇವುಗಳನ್ನು ಸರಿಪಡಿಸಬೇಕು ಇಲ್ಲದಿದ್ರೆ ನಮ್ಮಂಥೆ ಬೇರೆಯವರಿಗೂ ತಗಲುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/sharad-pawar-receives-love-letter-from-income-tax-day-after-change-of-guard-in-maharashtra/
ಕೋಲಾರ: ಚಿಕನ್ ಅಂದ್ರೆ ಸಾಕುಬಾಯಲ್ಲಿ ನೀರು ಬರುತ್ತೆ ಅನ್ನೋರೆ ಜಾಸ್ತಿ ಹೊಟ್ಟೆ ಹಸಿವು ತಣಿಸೋದಕ್ಕಾಗಿ ಗ್ರಾಹಕನೋರ್ವ ಹೋಟೆಲ್ ಒಂದರಲ್ಲಿ ಚಿಕನ್ ಲೆಗ್ ಪೀಸ್ ಕಬಾಬ್ ಪಾರ್ಸೆಲ್ ತೆಗೆದುಕೊಂಡು ಮನೆಗೆ ಹೋಗಿ ಹೊಟ್ಟೆ ತುಂಬ ತಿನ್ನಬೇಕು ಅನ್ನೋವಷ್ಟರಲ್ಲಿ ಅವನಿಗೆ ಶಾಕ್ ಆಯ್ತು..ಅರೇ ಯಾಕೆ ಅಂತಾ ಯೋಚಿಸ್ತಿದ್ದೀರಾ ಈ ಸ್ಟೋರಿ ಓದಿ.. https://kannadanewsnow.com/kannada/bjp-to-hold-massive-roadshow-in-hyderabad-today-tomorrow/ ಬಿಸಿಬಿಸಿಯಾದ ಚಿಕನ್ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್ ನಲ್ಲಿ ಪತ್ತೆಯಾಗಿದೆ. ಕೆಜಿಎಫ್ ನಗರದ ವಿನೋದ್ ಎಂಬುವವರು ತೆಗೆದುಕೊಂಡ ಚಿಕನ್ ಲೆಗ್ ಪೀಸ್ನಲ್ಲಿ ಹುಳ ಪತ್ತೆಯಾಗಿದೆ. ಗ್ರಾಹಕ ಚಿಕನ್ ಪೀಸ್ ಸಮೇತ ಹೋಟೆಲ್ಗೆ ಬಂದು ಮಾಲೀಕರನ್ನ ತರಾಟೆ ತೆಗೆದುಕೊಂಡಿದ್ದಾರೆ. https://kannadanewsnow.com/kannada/bjp-to-hold-massive-roadshow-in-hyderabad-today-tomorrow/ ಈ ವೇಳೆ ಪರಿಶೀಲಿಸಿದಾಗ ಹೋಟೆಲ್ನ ಮತ್ತಷ್ಟು ಚಿಕನ್ ಪೀಸ್ ನಲ್ಲೂ ಹುಳ ಪತ್ತೆಯಾಗಿದೆ. ಸ್ಥಳಕ್ಕೆ ನಗರಸಭೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು, ಹೋಟೆಲ್ಗೆ ಬೀಗ ಮುದ್ರೆ ಜಡಿದಿದ್ದಾರೆ. ಚಿಕನ್ ತಿನ್ನೋ ಈತನ ಆಸೆ ಕೊನೆಗೆ ಗಲಾಟೆಯಲ್ಲಿ ಕೊನೆಯಾಗಿದಂತೂ ನಿಜ
ಗದಗ : ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ದೊಣ್ಣೆಯಿಂದ ಹೊಡೆದು ಇಬ್ಬರ ಬರ್ಬರ ಹತ್ಯೆಗೈದಿದ್ದು, ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತಾಗಿದ್ದ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/ketanji-brown-jackson-becomes-first-black-female-supreme-court-justice/?utm_medium=push ಅನೈತಿಕ ಸಂಬಂಧದ ಹಿನ್ನೆಯಲ್ಲಿಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಫಕ್ಕಿರೇಶ್ (20),ಮಾಂತೇಶ್(26) ಮೃತಪಟ್ಟವರು.ಕೊಲೆ ಆರೋಪಿ ಮಂಜುನಾಥ್ (35) ಬಂಧನ ಮಾಡಲಾಗಿದೆ. ಶಿರಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/ketanji-brown-jackson-becomes-first-black-female-supreme-court-justice/?utm_medium=push
ಬೆಂಗಳೂರು : ಬೆಂಗಳೂರಿನಲ್ಲಿರುವ ಬಹುಪಾಲು ಪ್ರತಿಷ್ಠಿತ ಕಂಪನಿಗಳು, ಮಾಲ್, ಆಸ್ಪತ್ರೆಗಳು ಟ್ಯಾಕ್ಸ್ ಕಟ್ಟೋದಕ್ಕೆ ಹಿಂದೇಟು ಹಾಕಿದೆ ಇದರ ವಿರುದ್ಧ ಈಗಾಗಲೇ ಬಿಬಿಎಂಪಿ ನೋಟಿಸ್, ತಮಟೆ ಚಳುವಳಿ, ಒತ್ತಡ ಹೀಗೆ ಅನೇಕ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಆದಕ್ಕೂ ಬಗ್ಗದ ಕಂಪನಿಗಳಿಗೆ ಇದೀಗ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಹೊಸ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. https://kannadanewsnow.com/kannada/big-news-govt-bans-unauthorised-construction-on-state-highways-district-main-roads-mark-line-of-control/ ಐಟಿ ಇಲಾಖೆಯ ಸಲಹೆ ಮೇರೆಗೆ ನೇರವಾಗಿ ಬ್ಯಾಂಕ್ ಅಕೌಂಟ್ ಲಿಂಕ್ ಮೂಲಕ ʻಡಿಜಿಟಲ್ ಮಾರ್ಗದ ಮೂಲಕ ವಸೂಲಾತಿಗೆ ಬಿಬಿಎಂಪಿ ಮುಂದಾಗಿದೆ. ಯಾರು ತೆರಿಗೆ ಕಟ್ಟೊದಕ್ಕೆ ಹಿಂದೇಟು ಹಾಕುತ್ತಾರೋ ಅವರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದಂತೂ ನಿಜ. ನಿಮ್ಮ ಇಎಂಐ ಹೇಗೆ ಅಕೌಂಟ್ನಿಂದ ಹಣ ಕಟ್ ಅಗುತ್ತದೆಯೇ ಅದೇ ರೀತಿಯಲ್ಲಿ ಬಡ್ಡಿ ಸಮೇತ ವಸೂಲಾತಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಾರೆ. https://kannadanewsnow.com/kannada/big-news-govt-bans-unauthorised-construction-on-state-highways-district-main-roads-mark-line-of-control/ ಬಿಬಿಎಂಪಿಯ ಈ ಹೊಸ ಪ್ರಯೋಗದಿಂದ ಪ್ರತಿಷ್ಠಿತ ಕಂಪನಿಗಳಿಂದ ಈ ರೀತಿಯಾದ್ರೂ ತೆರೆಗೆ ವಸೂಲತಿ ಮಾಡಲಾಗುತ್ತದೆಯೋ ಇಲ್ಲವೇ ಅನ್ನೋದನ್ನು ಕಾದು ನೋಡಬೇಕಾಗಿದೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ʻ ಹಣ್ಣುಗಳ ರಾಜ ʼ ಎಂದು ಕರೆಯುವ ಮಾವಿನ ಹಣ್ಣು ಎಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ . ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ಮಾವಿನ ಹಣ್ಣುಗಳು ದರ್ಬಾರ್ . ಮಾವು ರುಚಿಯ ಜತೆಗೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. https://kannadanewsnow.com/kannada/6-0-magnitude-earthquake-rattles-northern-philippines/ ಮಾವಿನ ಹಣ್ಣಿನಂತೆ ಇದೀಗ ಮಾವಿನ ಬೀಜ (ಗೊರಟೆ) ಕೂಡಾ ಆರೋಗ್ಯಕ್ಕೆ ಪೂರಕ ಎಂಬುವುದು ನಿಮಗೆ ತಿಳಿದಿದ್ಯಾ..? ಈ ಲೇಖನದಲ್ಲಿ ನಾವು ನಿಮಗಾಗಿ ಮಾವಿನ ಬೀಜಗಳ ಕುರಿತು ಅದ್ಬುತ ಸಲಹೆಗಳನ್ನು ನೀಡುತ್ತೇವೆ. 1. ಹೊಟ್ಟೆಯ ಸಮಸ್ಯೆ ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಹೊಟ್ಟೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಇದು ನೀರಿನ ಕೊರತೆ ಅಥವಾ ತುಂಬಾ ಎಣ್ಣೆಯುಕ್ತ ಏನನ್ನಾದರೂ ತಿನ್ನುವುದು ಇದಕ್ಕೆ ಕಾರಣವಾಗಬಹುದು. ಇದರ ಚಿಕಿತ್ಸೆಗಾಗಿ ನೀವು ಮಾವಿನ ತಿರುಳುಗಳನ್ನು ಬಳಸಬಹುದು, ಅವುಗಳನ್ನು ಒಣಗಿಸಬಹುದು, ಪುಡಿಯನ್ನು ತಯಾರಿಸಬಹುದು ಮತ್ತು ಅದನ್ನು ನೀರಿನಿಂದ ಕುಡಿಯಬಹುದು, ಇದು ಹೊಟ್ಟೆನೋವು ಮತ್ತು ಅತಿಸಾರಕ್ಕೆ ಪರಿಹಾರವನ್ನು ನೀಡುತ್ತದೆ. https://kannadanewsnow.com/kannada/6-0-magnitude-earthquake-rattles-northern-philippines/ 2.…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಣದಲ್ಲಿಡಲು, ಸರಿಯಾದ ಆಹಾರ ಮತ್ತು ವ್ಯಾಯಾಮವನ್ನು ಮಾಡಿ. ಇದರೊಂದಿಗೆ, ಜನರು ಕಪ್ಪು-ಹಾಲಿನ ಚಹಾವನ್ನು ಹೊರತುಪಡಿಸಿ ಹಸಿರು ಚಹಾ ( Green Tea )ವನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಮತ್ತು ತಮ್ಮನ್ನು ತಾವು ಆರೋಗ್ಯವಾಗಿಡಲು ಜನರು ಹಸಿರು ಚಹಾವನ್ನು ಸೇವಿಸುತ್ತಾರೆ, ಆದರೆ ಕೆಲವರು ಅಗತ್ಯಕ್ಕಿಂತ ಹೆಚ್ಚು ಹಸಿರು ಚಹಾವನ್ನು ಕುಡಿಯುತ್ತಾರೆ, ಇದು ಪ್ರಯೋಜನದ ಬದಲು ನಿಮಗೆ ಆರೋಗ್ಯಕ್ಕೆ ಹಾನಿ ಮಾಡಬಹುದು. ನೀವು ಸಹ ದಿನಕ್ಕೆ ಅನೇಕ ಬಾರಿ ಗ್ರೀನ್ ಟೀ ಕುಡಿಯುತ್ತಿದ್ದರೆ, ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ https://kannadanewsnow.com/kannada/these-are-best-belly-fat-reducing-yogaasana/ ಹೆಚ್ಚು ಗ್ರೀನ್ ಟೀ ಕುಡಿಯುವುದರಿಂದ ಆಗುವ ಅನಾನುಕೂಲತೆಗಳೇನು ಇಲ್ಲಿದೆ ಸ್ಥೂಲಕಾಯ ಕಡಿಮೆ ಮಾಡುವ ಜನರು ಎಗ್ಗಿಲ್ಲದೇ ಸರ್ಕಸ್ ಮಾಡುತ್ತಾರೆ. ಅತಿಯಾದ ಪಥ್ಯಗಳನ್ನು ಪಾಲಿಸುತ್ತಾರೆ . ಇದರಿಂದ ಆಂತರಿಕ ದೇಹವು ದುರ್ಬಲಗೊಳ್ಳುತ್ತದೆ, ಅದು ಯಾವುದೇ ಸಮಸ್ಯೆಯನ್ನು ಆಹ್ವಾನಿಸಬಹುದು. ದಿನಕ್ಕೆ ಕೇವಲ 3 ಕಪ್ ಗ್ರೀನ್…