ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕಲ್ಲಂಗಡಿ ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಅನೇಕ ಜನರು ಕಲ್ಲಂಗಡಿಗಳನ್ನ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನ ಕಡಿಮೆ ಮಾಡುವ ವಸ್ತುಗಳಲ್ಲಿ ಈ ಹಣ್ಣು ಕೂಡ ಒಂದು. ಕಲ್ಲಂಗಡಿ ಹಣ್ಣನ್ನ ತಿನ್ನುವುದರಿಂದ ದೇಹವು ತೇವಾಂಶ ಮತ್ತು ತಂಪಾಗಿರುತ್ತದೆ.

ಅನೇಕ ಜನರು ಅರಿವಿಲ್ಲದೆಯೇ ಬೀಜಗಳೊಂದಿಗೆ ಕಲ್ಲಂಗಡಿ ತಿನ್ನುತ್ತಾರೆ. ಕೆಲವರು ಸುಮ್ಮನೆ ಎಸೆಯುತ್ತಾರೆ. ಕಲ್ಲಂಗಡಿ ಮಾತ್ರವಲ್ಲದೆ ಅದರ ಕಾಳುಗಳನ್ನೂ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಬೀಜಗಳನ್ನ ತಿನ್ನುವುದರಿಂದ ಮಧುಮೇಹವನ್ನ ನಿಯಂತ್ರಿಸಬಹುದು.

ಕಲ್ಲಂಗಡಿ ಹಣ್ಣಿನ ಜೊತೆಗೆ ಈ ಬೀಜಗಳನ್ನ ತಿಂದರೆ ನೀವು ಸದಾ ಯೌವನದಿಂದ ಇರುತ್ತೀರಿ. ಚರ್ಮವನ್ನ ಬಿಗಿಯಾಗಿ ಮತ್ತು ಸುಕ್ಕು ಮುಕ್ತವಾಗಿಸುತ್ತದೆ. ಈ ಬೀಜಗಳು ಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವು ತ್ವಚೆಯನ್ನ ಯೌವನದಿಂದ ಇಡುತ್ತವೆ.

ಈ ಬೀಜಗಳನ್ನ ತಿನ್ನುವುದರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಇದು ಜ್ಞಾಪಕ ಶಕ್ತಿಯನ್ನ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಮರೆವಿನ ಸಮಸ್ಯೆ ಇರುವವರು ಈ ಕಾಳುಗಳನ್ನ ತಿನ್ನುವುದು ತುಂಬಾ ಒಳ್ಳೆಯದು. ಮಕ್ಕಳಲ್ಲಿ ಏಕಾಗ್ರತೆಯೂ ಹೆಚ್ಚುತ್ತದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕಲ್ಲಂಗಡಿ ಬೀಜಗಳನ್ನ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಬೀಜಗಳಲ್ಲಿರುವ ಅರ್ಜಿನೈನ್ ರಕ್ತದ ಹರಿವನ್ನ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಜೈವಿಕ ಕಾರ್ಯವನ್ನ ಸಹ ಸುಧಾರಿಸುತ್ತದೆ.

 

BIG NEWS : ತೈವಾನ್ ನಲ್ಲಿ ಭೀಕರ ಭೂಕಂಪದಿಂದ ಸಾವು, ನೋವು : ಸಂತಾಪ ಸೂಚಿಸಿದ ಪ್ರಧಾನಿ ಮೋದಿ

BREAKING : ತೆಲಂಗಾಣದ ಫಾರ್ಮಾ ಘಟಕದಲ್ಲಿ ಭಯಾನಕ ಸ್ಫೋಟ : 7 ಮಂದಿ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

BIG NEWS : ತೈವಾನ್ ನಲ್ಲಿ ಭೀಕರ ಭೂಕಂಪದಿಂದ ಸಾವು, ನೋವು : ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Share.
Exit mobile version