ಬಳ್ಳಾರಿ: ಲಿಂಗಾಯುತ ಸಮುದಾಯದ ಹಿರಿಯ ಮುಖಂಡ, ಬಳ್ಳಾರಿಯ ಮಾಜಿ ಸಂಸದ ಕೂಳೂರು ಬಸವನಗೌಡ(88) ವಿಧಿವಶರಾಗಿದ್ದಾರೆ.

ಮಂಗಳೂರು ಬಾಂಬ್ ಸ್ಪೋಟ ; ಆಟೋ ಚಾಲಕನಿಗೆ ಸರ್ಕಾರದಿಂದ ಸೂಕ್ತ ಪರಿಹಾರ : ಸಚಿವ ಸುನೀಲ್ ಕುಮಾರ್

 

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೂಳೂರು ಬಸವನಗೌಡ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು(ನವೆಂಬರ್ 25) ಕೊನೆಯುಸಿರೆಳೆದರು.2000ರಲ್ಲಿ ಸೋನಿಯಾ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್​​​ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು. ನಾಳೆ(ನವೆಂಬರ್ 26) ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Share.
Exit mobile version