Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » Anganwadi Recruitment: ಅಂಗವನಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
    JOBS

    Anganwadi Recruitment: ಅಂಗವನಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    By Kannada NewsJanuary 15, 12:20 pm

    ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರಾವತಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 4 ಅಂಗನವಾಡಿ ಕಾರ್ಯಕರ್ತೆಯರು ಮತ್ತು 19 ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ.

    ಭದ್ರಾವತಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಹಾವುಗೊಲ್ಲರಕ್ಯಾಂಪ್ ಮಿನಿ, ಚಿಕ್ಕಗೊಪ್ಪೆನಹಳ್ಳಿ, ಸಿಂಗನ ಮನೆ-2, ಹೊಸೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 4 ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

    Coronavirus: ಬೆಂಗಳೂರಿನಲ್ಲಿ ಪೊಲೀಸರಿಗೆ 164 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್

    ಅಂಗನವಾಡಿ ಕೇಂದ್ರಗಳಾದ ಸಿದ್ದರಹಳ್ಳಿ(ಪ.ಜಾ), ದೊಣಭಘಟ್ಟ-4, ಸಿಂಗನಮನೆ-2, ಶಾಂತಿನಗರ-1, ನಾಗಸಮುದ್ರ-1, ಸುರಗಿತೋಪು-1, ಮೂಫಾಕಾಂಪೌಂಡ್, ಸೀಗೆಬಾಗಿ-3, ಫಿಲ್ಟರ್ಶೆಡ್, ಸಂಜಯ್ಕಾಲೋನಿ, ಹುತ್ತಾಕಾಲೋನ್, ಅಶೋಕ್‍ನಗರ-2, ಅರದೊಟ್ಟಲು, ಎಂ ಎಂ ಕಾಂಪೌಡ್, ಅರಳೀಹಳ್ಳಿ-1, ನೆಹರುನಗರ, ಸಣ್ಣಕುರುಬರ ಬೀದಿ, ಹಳೇಕೂಡ್ಲಿಗೆರೆ(ಪ.ಜಾತಿ) ಮತ್ತು ವೇಲೂರ್‍ಶೆಡ್-1 ಗಳಲ್ಲಿ 19 ಅಂಗನವಾಡಿ ಸಹಾಯಕಿರಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಭದ್ರಾವತಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

    BIG NEWS: ‘ಸಚಿವ ವಿ.ಸುನೀಲ್ ಕುಮಾರ್’ ಅವರಿಗೂ ಕೊರೋನಾ ಪಾಸಿಟಿವ್ | Minister V Sunil Kumar

    ಸೊರಬ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ

    ಸೊರಬ ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಪುರದೂರು, ಚಾಮರಾಜಪೇಟೆ ಮಿನಿ (ವಾ.ನಂ.:5), ಹಿರೇಕಬ್ಬೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಜೋಗಿಹಳ್ಳಿ, ತಾವರೆಹಳ್ಳಿ, ಕುಳುವಳ್ಳಿ, ಇಂಡುವಳ್ಳಿ, ಬಿ-ಇಂಡುವಳ್ಳಿ, ಚಗಟೂರು, ಮೂಡಿ-1, ಯಲಸಿ-1, ಬನದಕೊಪ್ಪ, ತಲಕಾಲುಕೊಪ್ಪ, ಬಂಗಾರಪ್ಪ ಬಡಾವಣೆ (ವಾ.ನಂ.:2) ಹಾಗೂ ಓಟೂರು ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.

    ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಹಾಗೂ ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣರಾದ 18-35 ವರ್ಷ ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ದಿ: 13/02/2022 ರೊಳಗಾಗಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    ಶಿವಮೊಗ್ಗ: ಜ.17ರಿಂದ 24ರವರೆಗೆ ‘ವಾಣಿಜ್ಯ ಪರೀಕ್ಷೆ’ ಹಿನ್ನಲೆಯಲ್ಲಿ, ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

    ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸೊರಬ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ದೂ.ಸಂ. 08184-295896 ನ್ನು ಸಂಪರ್ಕಿಸುವುದು.

    ಸಾಗರ ತಾಲೂಕಿನ ಅಂಗವನಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ

    ಶಿಶು ಅಭಿವೃದ್ದಿ ಯೋಜನೆ ಸಾಗರ ವ್ಯಾಪ್ತಿಯ ಕೆಳಕಂಡ ಗ್ರಾಮಗಳಿಂದ ಅಂಗನವಾಡಿ ಕಾರ್ಯಕರ್ತೆ/ಮಿನಿ ಕಾರ್ಯಕರ್ತೆ/ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ವಿವರ : ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ತಾವರೇಹಳ್ಳಿ, ಬರೂರು, ಕೊಳೆಗೋಡು(ಮಿನಿ), ಕಾನಗೋಡು+ಬೆನವಗೋಡು(ಮಿನಿ), ಮಡಸೂರು, ವಡಂಬೈಲು, ಕಾರೇಹೊಂಡ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಂದಾಸುರ, ಕೆರೆಹಿತ್ಲು, ಲಕ್ಕವಳ್ಳಿ, ಬರೂರು, ದೊಡ್ಡಬ್ಯಾಣ, ಸಂಗಣ್ಣನಕೆರೆ, ನಂದೀತಳೆ, ಅಡೂರು ಇಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

    BIGG BREAKING NEWS: ಇನ್ಮುಂದೆ ಜ.23ರಿಂದಲೇ ‘ಗಣರಾಜ್ಯೋತ್ಸವ’ ಸಂಭ್ರಮಾಚರಣೆ ಆರಂಭ | Republic Day Celebrations

    ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣ ಹೊಂದಿದ ಎಸ್‍ಎಸ್‍ಎಲ್‍ಸಿ ಒಳಗಿನ ವಿದ್ಯಾರ್ಹತೆಯುಳ್ಳ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in  ನಲ್ಲಿ ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

    ವಸತಿ ಶಾಲೆಯ 16 ವಿದ್ಯಾರ್ಥಿಗಳಿಗೆ ಕೊರೋನಾ ದೃಢ: ಶಾಲೆ ಸೀಲ್ ಡೌನ್.!

    ಶಿವಮೊಗ್ಗ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪ-1, ಹರಪನಹಳ್ಳಿ ಕ್ಯಾಂಪ್ ಮಿನಿ, ಗುಡ್ಡದ ಅರಕೆರೆ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಕಲ್ಲೂರು, ವೀರಣ್ಣನ ಬೆನವಳ್ಳಿ, ಹೊಳೆಹನಸವಾಡಿ, ದೇವಕಾತಿಕೊಪ್ಪ, ಚಿಕ್ಕದಾನವಂದಿ, ರಾಗಿಹೊಸಳ್ಳಿ, ಪುರಲೆ-1, ಗಾಡಿಕೊಪ್ಪ-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ದಿ: 13/02/2022 ರೊಳಗಾಗಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ , 1ನೇ ತಿರುವು, ಬಸವನಗುಡಿ, ಆಫೀಸರ್ಸ್ ಕ್ಲಬ್ ಪಕ್ಕ, ದೂ.ಸಂ. 08182-295110 ನ್ನು ಸಂಪರ್ಕಿಸುವುದು.



    best web service company
    Share. Facebook Twitter LinkedIn WhatsApp Email

    Related Posts

    ಬಿಜೆಪಿ ಸಮಾವೇಶಕ್ಕೆ ಡೇಟ್‌ ಫಿಕ್ಸ್ : ಚುನಾವಣೆ ರಣ ಕಹಳೆಗೆ ಕಮಲ ಪಡ್ಡೆ ಸಜ್ಜು

    August 12, 7:56 pm

    ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

    August 12, 7:56 pm

    BIGG NEWS: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

    August 12, 7:46 pm
    Recent News

    BREAKING NEWS : ಜನಪ್ರಿಯ ‘VLC ಮೀಡಿಯಾ ಪ್ಲೇಯರ್’ ಬ್ಯಾನ್‌ ; ‘ವೆಬ್ಸೈಟ್, VLC ಡೌನ್ಲೋಡ್ ಲಿಂಕ್’ ನಿರ್ಬಂಧ |VLC Media Player banned in India

    August 12, 9:32 pm
    BIG BREAKING NEWS: Serious attack on writer Salman Rushdie in America, critical condition

    BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ

    August 12, 9:07 pm
    BIG BREAKING NEWS: Serious attack on writer Salman Rushdie in America, critical condition

    BREAKIG NEWS : ನ್ಯೂಯಾರ್ಕ್‌ನಲ್ಲಿ ಉಪನ್ಯಾಸದ ವೇಳೆ ಲೇಖಕ ‘ಸಲ್ಮಾನ್ ರಶ್ದಿ’ ಮೇಲೆ ಹಲ್ಲೆ

    August 12, 9:02 pm

    ಚಹಾ ಪ್ರಿಯರೇ ಎಚ್ಚರ.! ಹೆಚ್ಚು ‘ಚಹಾ’ದಿಂದ ಗಂಭೀರ ಸಮಸ್ಯೆ, ‘ಅಧ್ಯಯನ’ದಿಂದ ಶಾಕಿಂಗ್‌ ಸಂಗತಿ ಬಹಿರಂಗ

    August 12, 8:31 pm
    State News
    KARNATAKA

    ಬಿಜೆಪಿ ಸಮಾವೇಶಕ್ಕೆ ಡೇಟ್‌ ಫಿಕ್ಸ್ : ಚುನಾವಣೆ ರಣ ಕಹಳೆಗೆ ಕಮಲ ಪಡ್ಡೆ ಸಜ್ಜು

    By Kannada NewsAugust 12, 7:56 pm0

    ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆಯ (ಆಗಸ್ಟ್‌ 13) ಪ್ರಯುಕ್ತ ರಾಜ್ಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ…


    ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

    August 12, 7:56 pm

    BIGG NEWS: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

    August 12, 7:46 pm
    RAKSHA BANDHAN

    ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ಶಿಕ್ಷಕಿ

    August 12, 6:49 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.