‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ನಾಳೆಯಿಂದ ಬೆಂಗಳೂರಿನ ‘ಆನೇಕಲ್ ರೈಲ್ವೆ ಟಿಕೆಟ್ ಕೇಂದ್ರ’ ಪುನರಾರಂಭ
ಬೆಂಗಳೂರು: ಫೆಬ್ರವರಿ.1ರ ನಾಳೆಯಿಂದ ಆನೇಕಲ್ ನಲ್ಲಿರುವಂತ ನೈರುತ್ಯ ರೈಲ್ವೆಯ ಪ್ರಯಾಣಿಕರ ಕಾಯ್ದಿರಿಸುವಿಕೆಯ ಟಿಕೆಟ್ ಕೌಂಟರ್ ಸಾರ್ವಜನಿಕರ ಸೇವೆಗೆ ಪುನರಾರಂಭಗೊಳ್ಳಲಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಆನೇಕಲ್ನಲ್ಲಿರುವ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವಿಕೆ ಕೇಂದ್ರವು 01.02.2024 ರಿಂದ ಕಾಯ್ದಿರಿಸುವಿಕೆ ಪುನರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ. ಕೇಂದ್ರವು ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 08.00 ರಿಂದ ಮಧ್ಯಾಹ್ನ 2.00 ರವರೆಗೆ ಕಾರ್ಯನಿರ್ವಹಿಸುತ್ತದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಎಂದು ಹೇಳಿದೆ. … Continue reading ‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ನಾಳೆಯಿಂದ ಬೆಂಗಳೂರಿನ ‘ಆನೇಕಲ್ ರೈಲ್ವೆ ಟಿಕೆಟ್ ಕೇಂದ್ರ’ ಪುನರಾರಂಭ
Copy and paste this URL into your WordPress site to embed
Copy and paste this code into your site to embed