BREAKING NEWS: ಆಂಧ್ರದ ಖಾಸಗಿ ಆಸ್ಪತ್ರೆ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ, ವೈದ್ಯ ಸೇರಿ ಆತನ ಇಬ್ಬರು ಮಕ್ಕಳು ಸಜೀವ ದಹನ

ತಿರುಪತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ತಿರುಪತಿಯ ರೇಣಿಗುಂಟಾದಲ್ಲಿ ಹೊಸದಾಗಿ ನಿರ್ಮಿಸಲಾದ ಕಾರ್ತಿಕೇಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವೈದ್ಯ ಸೇರಿ ಆತನ ಇಬ್ಬರು ಮಕ್ಕಳು ಸಜೀವದಹನವಾಗಿರುವ ಘಟನೆ ನಡೆದಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ವೈದ್ಯರ ಕುಟುಂಬ ವಾಸವಿದ್ದರು. ಬೆಂಕಿಯಲ್ಲಿ ಸಿಲುಕಿದ್ದ ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ರವಿಶಂಕರ ರೆಡ್ಡಿ ಎಂದು ಗುರುತಿಸಲಾದ ವೈದ್ಯರು ಸಜೀವ ದಹನವಾಗಿದ್ದಾರೆ. ಮಾಹಿತಿಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ಡಾ.ರವಿಶಂಕರ್ ರೆಡ್ಡಿ (45), … Continue reading BREAKING NEWS: ಆಂಧ್ರದ ಖಾಸಗಿ ಆಸ್ಪತ್ರೆ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ, ವೈದ್ಯ ಸೇರಿ ಆತನ ಇಬ್ಬರು ಮಕ್ಕಳು ಸಜೀವ ದಹನ