ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿಗಂತ್ ಆರೋಗ್ಯವಾಗಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ಮುಗಿದ್ದು, ಯಾವುದೇ ಆತಂಕವಿಲ್ಲ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದಾಗಿ ಪತ್ನಿ ಐಂದ್ರಿತಾ ರೇ ಸ್ಪಷ್ಟ ಪಡಿಸಿದ್ದಾರೆ.
‘ಕಾಂಗ್ರೆಸ್’ನವರು ಮಾತ್ರ ತಪ್ಪು ಮಾಡಿರೋದಾ.? ‘BJP’ಯವರು ತಪ್ಪೇ ಮಾಡಿಲ್ವಾ.? – ಶಾಸಕ ಜಮೀರ್ ಅಹ್ಮದ್
ಇಂದು ಮಣಿಪಾಲ್ ಆಸ್ಪತ್ರೆಯ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ನೀಡಿದ ಅವರು, ನಾನು ಮತ್ತು ದಿಗಂತ್ ಗೋವಾಕ್ಕೆ ವೆಕೇಷನ್ ಗಾಗಿ ಹೋಗಿದ್ದೆವು. ಗೋವಾದ ರೆಸಾರ್ಟ್ ಒಂದರ ಬಳಿಯಲ್ಲಿ ಪಲ್ಟಿ ಹೊಡೆಯುವಾಗ ಅವರಿಗೆ ಗಾಯವಾಗಿತ್ತು ಎಂದರು.
ಗೋವಾದ ರೆಸಾರ್ಟ್ ಬಳಿಯಲ್ಲಿ ಗಾಯಗೊಂಡ ಅವರನ್ನು, ಕೂಡಲೇ ಗೋವಾದಲ್ಲಿರುವಂತ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸರ್ಜರಿ ಸಲುವಾಗಿ ಏರ್ ಲಿಫ್ಟ್ ಮೂಲಕ ಕರೆತರಲಾಗಿತ್ತು ಎಂದರು.
ಶಿವಮೊಗ್ಗ: ನಾಳೆ ಸೊರಬ ತಾಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಆದಂತ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಅವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.