Breaking news:‌ ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಸ್ವಿಫ್ಟ್‌ ಕಾರು ಡಿಕ್ಕಿ, ತಂದೆ-ಇಬ್ಬರು ಮಕ್ಕಳ ದುರ್ಮರಣ

ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್‌ ಕಾರು ಡಿಕ್ಕಿಯಾದ ಪರಿಣಾಮ, ಕಾರಿನಲಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು ಅವಿನಾಶ್(28)‌, ಪ್ರಣಂತಿ(5), ಸೌಖ್ಯಾ(3) ಎಂದು ಗುರುತಿಸಲಾಗಿದೆ. ಲಾರಿಗೆ ಗುದ್ದಿದ ರಭಸಕ್ಕೆ ಸ್ವಿಫ್ಟ್‌ ಕಾರು ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Big news:‌ ʻಮಂಕಿಪಾಕ್ಸ್ʼಸೋಂಕಿನ ಆರಂಭಿಕ ಪತ್ತೆಗಾಗಿ ಭಾರತದ ಮೊದಲ ಸ್ಥಳೀಯ ಆರ್‌ಟಿ-ಪಿಸಿಆರ್ … Continue reading Breaking news:‌ ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಸ್ವಿಫ್ಟ್‌ ಕಾರು ಡಿಕ್ಕಿ, ತಂದೆ-ಇಬ್ಬರು ಮಕ್ಕಳ ದುರ್ಮರಣ