Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 4 ಸಾವಿರ ಹುದ್ದೆ ಭರ್ತಿಗೆ ಕ್ರಮ : ಈಶ್ವರ್ ಖಂಡ್ರೆ

GOOD NEWS : `PF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ 100% ಹಣ ವಿತ್‌ ಡ್ರಾ ಮಾಡಬಹುದು!

ಚಿಕ್ಕಮಗಳೂರಲ್ಲಿ ಅನ್ಯಕೋಮಿನ ಯುವಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ : FIR ದಾಖಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : `PF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ 100% ಹಣ ವಿತ್‌ ಡ್ರಾ ಮಾಡಬಹುದು!
INDIA

GOOD NEWS : `PF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ 100% ಹಣ ವಿತ್‌ ಡ್ರಾ ಮಾಡಬಹುದು!

By kannadanewsnow57

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಕೋಟ್ಯಂತರ ಖಾತೆದಾರರಿಗೆ ದೊಡ್ಡ ರಿಲೀಫ್ ನೀಡಿದೆ. ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿರುವ ಇಪಿಎಫ್‌ಒ, ಕೆಲವು ವಿಶೇಷ ಸಂದರ್ಭಗಳಲ್ಲಿ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು (ಶೇ. 100 ರಷ್ಟು) ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.

ಅತ್ಯಂತ ಪ್ರಮುಖ ವಿಷಯವೆಂದರೆ, ಅರ್ಹ ಸದಸ್ಯರು ಇನ್ಮುಂದೆ ಈ ಹಣವನ್ನು ವಿತ್‌ಡ್ರಾ ಮಾಡಲು ಯಾವುದೇ ಕಾರಣವನ್ನು ನೀಡುವ ಅಗತ್ಯವಿರುವುದಿಲ್ಲ. ಪಿಎಫ್ ಕ್ಲೈಮ್‌ಗಳು ತಿರಸ್ಕಾರಗೊಳ್ಳುವುದನ್ನು ತಪ್ಪಿಸಲು ಮತ್ತು ತುರ್ತು ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಕಾಲದಲ್ಲಿ ಆರ್ಥಿಕ ಸಹಾಯ ಸಿಗುವಂತೆ ಮಾಡಲು ಇಪಿಎಫ್‌ಒ ಈ ನಿರ್ಧಾರ ಕೈಗೊಂಡಿದೆ.

ನಿಯಮಗಳಲ್ಲಾದ ಪ್ರಮುಖ ಬದಲಾವಣೆಗಳೇನು?

ಹಿಂದಿನ ನಿಯಮಗಳ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆಯಲು ಸದಸ್ಯರು ಸೂಕ್ತ ಕಾರಣ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಪುರಾವೆಗಳನ್ನು ಸಲ್ಲಿಸಬೇಕಾಗಿತ್ತು. ಒಂದು ವೇಳೆ ಕಾರಣ ಅಥವಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ಅಧಿಕಾರಿಗಳು ಕ್ಲೈಮ್‌ಗಳನ್ನು ತಿರಸ್ಕರಿಸುತ್ತಿದ್ದರು. ಅಲ್ಲದೆ, ಈ ಹಿಂದೆ ಕೇವಲ ಶೇ. 75 ರಷ್ಟು ಬ್ಯಾಲೆನ್ಸ್ ಮಾತ್ರ ಹಿಂಪಡೆಯಲು ಅವಕಾಶವಿತ್ತು.

ಆದರೆ, ಈಗ ಖಾತೆದಾರರ ಅಲೆದಾಟವನ್ನು ತಪ್ಪಿಸಲು ಇಪಿಎಫ್‌ಒ ನಿಯಮಗಳನ್ನು ಸಡಿಲಗೊಳಿಸಿದೆ. ಇನ್ಮುಂದೆ ಯಾವುದೇ ಕಾರಣ ನೀಡದೆ ವಿಶೇಷ ಪ್ರಕರಣದ ಅಡಿಯಲ್ಲಿ ಶೇ. 100 ರಷ್ಟು ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ಪಿಎಫ್ ಸಂಸ್ಥೆಯು ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲು ಹಲವು ಸುಧಾರಣೆಗಳನ್ನು ತರುತ್ತಿದ್ದು, ಇದು ಅದರದೇ ಒಂದು ಭಾಗವಾಗಿದೆ.

ಯಾವೆಲ್ಲಾ ಸಂದರ್ಭಗಳಲ್ಲಿ 100% ಹಣವನ್ನು ಹಿಂಪಡೆಯಬಹುದು?
ಕೆಳಗಿನ ವಿಶೇಷ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯ ಸಂಪೂರ್ಣ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ:

ಕಂಪನಿ ಲಾಕೌಟ್ / ಮುಚ್ಚಿ ಹಾಕುವುದು: ಉದ್ಯೋಗಿ ಕೆಲಸ ಮಾಡುವ ಕಂಪನಿಯು 15 ದಿನಗಳಿಗಿಂತ ಹೆಚ್ಚು ಕಾಲ ಲಾಕೌಟ್ ಆಗಿದ್ದರೆ ಅಥವಾ ಮುಚ್ಚಲ್ಪಟ್ಟಿದ್ದರೆ.

ಉದ್ಯೋಗ ನಷ್ಟ: ಯಾವುದೇ ಪರಿಹಾರವಿಲ್ಲದೆ ಉದ್ಯೋಗಿ ನಿರುದ್ಯೋಗಿಯಾಗಿದ್ದರೆ.

ವೇತನ ಪಾವತಿಯಾಗದಿದ್ದರೆ: ಸತತ ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಕಂಪನಿಯಿಂದ ಸಂಬಳ ಬರದೇ ಇದ್ದರೆ.

ಕಾನೂನು ಮತ್ತು ಉದ್ಯೋಗದ ಸಮಸ್ಯೆಗಳು: ಉದ್ಯೋಗಿಯ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದ್ದಾಗ, ಕೆಲಸದಿಂದ ವಜಾಗೊಳಿಸಿದಾಗ, ಸ್ವಯಂ ನಿವೃತ್ತಿ ಅಥವಾ ಉದ್ಯೋಗ ಕಡಿತದ ಸಂದರ್ಭಗಳಲ್ಲಿ.

ದೀರ್ಘಕಾಲದ ನಿರುದ್ಯೋಗ: ಉದ್ಯೋಗಿ ದೀರ್ಘಕಾಲದವರೆಗೆ ನಿರುದ್ಯೋಗಿಯಾಗಿ ಉಳಿದಾಗ.

ಆರೋಗ್ಯ ತುರ್ತು ಪರಿಸ್ಥಿತಿ: ಗಂಭೀರ ಕಾಯಿಲೆ ಅಥವಾ ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿರುವ ಸಂದರ್ಭಗಳಲ್ಲಿ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

GOOD NEWS: Great good news for `PF' account holders: From now on you can withdraw 100% of your money!
Share. Facebook Twitter LinkedIn WhatsApp Email

Related Posts

GOOD NEWS : ಕ್ಯಾನ್ಸರ್‌ ರೋಗಿಗಳಿಗೆ ಸಿಕ್ತು ಸಂಜೀವಿನಿ : ರೋಗಿಗಳ ಜೀವಿತಾವಧಿ ದ್ವಿಗುಣಗೊಳಿಸಬಲ್ಲ ಹೊಸ ಮಾತ್ರೆ!

2 Mins Read

​ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದ ಆಹಾರಗಳು ಯಾವುವು? ಆರೋಗ್ಯ ತಜ್ಞರ ಸಲಹೆಗಳಿವು!

2 Mins Read

ಟಿಎಂಸಿಯಲ್ಲಿ ಬಂಡಾಯದ ಕಾವು: ಅಮಿತ್ ಶಾ ಭೇಟಿಗೆ ಮುಂದಾದ ಯೂಸುಫ್ ಪಠಾಣ್‌ಗೆ ತರಾಟೆ ತೆಗೆದುಕೊಂಡ ಮಹುವಾ ಮೊಯಿತ್ರಾ

2 Mins Read
Recent News

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 4 ಸಾವಿರ ಹುದ್ದೆ ಭರ್ತಿಗೆ ಕ್ರಮ : ಈಶ್ವರ್ ಖಂಡ್ರೆ

GOOD NEWS : `PF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ 100% ಹಣ ವಿತ್‌ ಡ್ರಾ ಮಾಡಬಹುದು!

ಚಿಕ್ಕಮಗಳೂರಲ್ಲಿ ಅನ್ಯಕೋಮಿನ ಯುವಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ : FIR ದಾಖಲು!

`JCB’ ಅಸಲಿ ಹೆಸರೇನು ಗೊತ್ತಾ..? ಇವು ಹಳದಿ ಬಣ್ಣದಲ್ಲೇ ಇರಲು ಕಾರಣವೇನು? ಯಾರಿಗೂ ತಿಳಿಯದ ಸತ್ಯ ಇಲ್ಲಿದೆ!

State News
KARNATAKA

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 4 ಸಾವಿರ ಹುದ್ದೆ ಭರ್ತಿಗೆ ಕ್ರಮ : ಈಶ್ವರ್ ಖಂಡ್ರೆ

By ಸುರೇಶ್‌ KARNATAKA 1 Min Read

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 25,540 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ ಖಾಲಿ ಇರುವ 8,770…

ಚಿಕ್ಕಮಗಳೂರಲ್ಲಿ ಅನ್ಯಕೋಮಿನ ಯುವಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ : FIR ದಾಖಲು!

`JCB’ ಅಸಲಿ ಹೆಸರೇನು ಗೊತ್ತಾ..? ಇವು ಹಳದಿ ಬಣ್ಣದಲ್ಲೇ ಇರಲು ಕಾರಣವೇನು? ಯಾರಿಗೂ ತಿಳಿಯದ ಸತ್ಯ ಇಲ್ಲಿದೆ!

BREAKING : ಕಾಂಗ್ರೆಸ್ ಮುಖಂಡನಿಂದ ಉದ್ಯಮಿಗೆ ಹನಿಟ್ರ್ಯಾಪ್ : 2 ಕೋಟಿಗೂ ಅಧಿಕ ಹಣ ವಸೂಲಿ, ಇಬ್ಬರು ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.