ದೊಡ್ಡಬಳ್ಳಾಪುರ: ತಾನೇ ಸೇರಿದಂತ ಸಿಗರೇಟ್ ತುಂಡಿನಲ್ಲಿ ಬೆಂಕಿ ಹಾರಿಸದೇ ಬಿಸಾಕಿದ್ದರಿಂದ ಅದೇ ಕಿಡಿಯಿಂದ ಮನೆ ಹೊತ್ತಿಕೊಂಡು, ವ್ಯಕ್ತಿಯೊಬ್ಬ ಸಜೀವದಹನವಾಗಿರುವಂತ ಘಟನೆ ದೊಡ್ಡಬಳ್ಳಆಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಕಾಲೋನಿಯ ಉದಯ್ ಕುಮಾರ್(40) ಧೂಮಪಾನಿಯಾಗಿದ್ದರು. ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಕುಡಿತದ ಅಮಲಿನಲ್ಲಿ ಸಿಗರೇಟ್ ಸೇದಿ, ಉಳಿದ ತುಂಡನ್ನು ಅಲ್ಲೇ ಎಸೆದಿದ್ದಾನೆ. ಈ ತುಂಡು ಮನೆಯಲ್ಲಿದ್ದಂತ ಬಟ್ಟೆಯ ರಾಶಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಸಿಗರೇಟ್ ತುಂಡಿನಿಂದ ಹೊತ್ತಿಕೊಂಡ ಬೆಂಕಿ ಮನೆಯನ್ನು ಆವರಿಸಿ ಹೊತ್ತಿಕೊಂಡು ಉರಿದಿದೆ.
ತಾನೇ ಸೇದಿದಂತ ಸಿಗರೇಟ್ ಕಿಡಿಯಿಂದ ಮನೆ ಹೊತ್ತಿಕೊಂಡು ಅದರೊಳಗಿದ್ದಂತ ಉದಯ್ ಕುಮಾರ್(40) ಸಜೀವ ದಹನವಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
‘GPay, PhonePe, Paytm’ನಲ್ಲಿ ಪಾವತಿ ವಿಫಲವಾದ್ರು ಹಣ ಕಟ್ ಆಗಿದ್ಯಾ.? ಈ ಹಂತ ಅನುಸರಿಸಿ, ಮರಳಿ ಖಾತೆ ಸೇರುತ್ತೆ