Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗ ಶಾಸಕ ಭೈರತಿ ಬಸವರಾಜ್

19/07/2025 3:59 PM

ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

19/07/2025 3:54 PM

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ಧರಾಮಯ್ಯ

19/07/2025 3:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ
KARNATAKA

ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

By kannadanewsnow0919/07/2025 3:54 PM

ಬೆಂಗಳೂರು: ರಾಜ್ಯ ಸರಕಾರ ಯಾವ ರಿಯಲ್ ಎಸ್ಟೇಟ್ ಸಲುವಾಗಿ ಕೆಲಸ ಮಾಡುತ್ತಿದೆ? ಯಾರನ್ನು ಓಲೈಕೆ ಮಾಡುತ್ತೀರಿ? ಅಥವಾ ಯಾರಿಂದ ಸೂಟ್‍ಕೇಸ್ ಬಂದಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.

ಹೆಬ್ಬಾಳದಲ್ಲಿ ಬಿ.ಎಂ.ಆರ್.ಸಿ.ಎಲ್ ಗೆ 45 ಎಕರೆ ಭೂಮಿಯನ್ನು ಮಂಜೂರು ಮಾಡುವ ಬದಲು ಕೇವಲ 9 ಎಕರೆ ಭೂಮಿಯನ್ನು ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡರ ಜೊತೆ ಅವರು ಇಂದು ಹೆಬ್ಬಾಳದ ಫ್ಲೈ ಓವರ್ ಬಳಿ ಇರುವ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ಭೂಮಿ ರೈತರದು. ಇಲ್ಲಿ ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೆಮ್ಮನಕೆರೆ ಮತ್ತು ಹೆಬ್ಬಾಳ ಗ್ರಾಮದ 55 ಎಕರೆ ಜಮೀನನ್ನು ಜೂನ್ 2000ದಲ್ಲಿ ಎಸ್.ಎಂ. ಕೃಷ್ಣ ಅವರ ಸರಕಾರ ಇದ್ದಾಗ ಗ್ಲೋಬಲ್ ಇನ್‍ವೆಸ್ಟರ್ಸ್ ಮೀಟ್ ವೇಳೆ ವಶಕ್ಕೆ ಪಡೆದಿದ್ದರು. ಬೇರೆಬೇರೆ ರೀತಿಯ ಸಾಂಸ್ಕøತಿಕ ಚಟುವಟಿಕೆಗೆ ಅವಕಾಶ ನೀಡುವುದು, ಹೋಟೆಲ್‍ಗಳ ಸ್ಥಾಪನೆಯ ಉದ್ದೇಶ ಇತ್ತು ಎಂದು ವಿವರಿಸಿದರು.
ಈ ಪೈಕಿ 4.5 ಎಕರೆ ಜಮೀನು ಲಕ್ಷ್ಮಿ ಟೂರಿಸಂಗೆ ನೀಡಿದ್ದಾರೆ. ಕೆಲವು ಭಾಗ ಮೆಟ್ರೊ, ರಸ್ತೆಗೆ ಹೋಗಿದೆ. ಅಂತಿಮವಾಗಿ ಉಳಿದಿರುವ 48 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಬೇಕೆಂಬ ಬೇಡಿಕೆ ಸಾರ್ವಜನಿಕರದು. ಅದನ್ನು ಈಡೇರಿಸುವಂತೆ ಒತ್ತಾಯಿಸಿದರು.

ದೊಡ್ಡ ಪ್ರಮಾಣದ ಮೆಟ್ರೊ ಸ್ಟೇಷನ್ ಬೇಕು. ಬಿಎಂಟಿಸಿ ಡಿಪೋ ಅಭಿವೃದ್ಧಿ ಆಗಬೇಕಿದೆ. ವಿಮಾನನಿಲ್ದಾಣಕ್ಕೆ ಇದೇ ಹೆಬ್ಬಾಳ ರಸ್ತೆ ಮೂಲಕ 1.5 ಲಕ್ಷ ವಾಹನಗಳು ಓಡಾಡುತ್ತಿವೆ. ವಿಮಾನನಿಲ್ದಾಣಕ್ಕೆ 4-5 ಸಾವಿರ ವಾಹನಗಳು ಓಡಾಡುತ್ತಿವೆ. ಹೆಬ್ಬಾಳದಲ್ಲೇ ಬೋರ್ಡಿಂಗ್ ಪಾಸ್, ಇಮಿಗ್ರೇಶನ್ ಸಂಬಂಧಿತ ವ್ಯವಸ್ಥೆಗೆ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಕಚೇರಿ ಮಾಡಿಕೊಡಬೇಕಿದೆ. ದೇವನಹಳ್ಳಿ ರಸ್ತೆಯಲ್ಲಿ ವಾಹನ ಸಂದಣಿ ಕಡಿಮೆ ಮಾಡಲು ಅವಕಾಶವಿದೆ ಎಂದು ನುಡಿದರು.

ಸಬರ್ಬನ್‍ಗೆ ಜಮೀನು ಬೇಕು. ವರ್ತುಲ ರೈಲ್ವೆಗೆ ಜಮೀನು ಬೇಕು. ರೈಲ್ವೆ ಸ್ಟೇóಷನ್‍ಗೆ ಜಮೀನು ಬೇಕು. ಬಿಎಂಟಿಸಿಗೆ ಜಮೀನು ಅಗತ್ಯವಿದೆ. ಏರ್‍ಪೋರ್ಟಿಗೆ ವ್ಯವಸ್ಥೆಗೂ ಜಮೀನು ಅವಶ್ಯ. ಮೇ 1ರಂದು ಕಾಂಗ್ರೆಸ್ ಸರಕಾರವು 45 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಲು ಕೊಡುವುದಾಗಿ ತಿಳಿಸಿತ್ತು. ಕೇವಲ 1 ತಿಂಗಳಲ್ಲಿ ಇದು ವ್ಯತ್ಯಾಸ ಆದುದೇಕೆ ಎಂದು ಕೇಳಿದರು.

2004ರಲ್ಲಿ ಭೂ ವಶಕ್ಕೆ ಪಡೆಯುವ ಸಂಬಂಧ ಅಂತಿಮ ಅಧಿಸೂಚನೆ ಆಗಿತ್ತು. ಇವತ್ತಿನತನಕ ಈ ಜಮೀನು ಖಾಲಿ ಬಿದ್ದಿದ್ದು, ಕಸ ತುಂಬುತ್ತಿದೆ ಎಂದು ಆಕ್ಷೇಪಿಸಿದರು.

ರೈತರಿಗೆ ಪರಿಹಾರ ಮೊತ್ತ ಕೊಟ್ಟಿಲ್ಲ; ಕೆಐಎಡಿಬಿ ಆವತ್ತು ಜಾಗವನ್ನು ಲೇಕ್ ವ್ಯೂ ಟೂರಿಸಂ ಸಲುವಾಗಿ ವಶಕ್ಕೆ ಪಡೆದಿದ್ದು, ಇದರ ಮಾಲೀಕತ್ವ ಕೆಐಎಡಿಬಿ ಅಡಿ ಇದೆ ಎಂದು ತಿಳಿಸಿದರು.

ಇಲ್ಲೇ ರೋಹಿಂಗ್ಯಾಗಳು, ಅಪರಾಧ ಹಿನ್ನೆಲೆ ಉಳ್ಳವರು ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇದರ ಕುರಿತು ತನಿಖೆ ನಡೆಸಬೇಕು. ಎನ್‍ಐಎ ಇದರ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದೇಶದ್ರೋಹ ಮಾಡುವ ವ್ಯಕ್ತಿಗಳು ಇಲ್ಲಿ ನೆಲೆಸಿದ್ದಾರೆ. 48 ಎಕರೆ ಜಾಗವನ್ನೂ ಸರಕಾರ ಕೆಐಎಡಿಬಿ ವಶಕ್ಕೆ ಪಡೆದು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂಗೆ ಕೊಡಬೇಕೆಂದು ಅವರು ಆಗ್ರಹವನ್ನು ಮುಂದಿಟ್ಟರು. ರೈತರಿಗೆ ಇವತ್ತಿನ ಮಾರುಕಟ್ಟೆ ದರದಲ್ಲಿ ಪರಿಹಾರಧನ ನೀಡಬೇಕು ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷದ ಪ್ರಮುಖರು ಇದ್ದರು.

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗ ಶಾಸಕ ಭೈರತಿ ಬಸವರಾಜ್

19/07/2025 3:59 PM1 Min Read

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ಧರಾಮಯ್ಯ

19/07/2025 3:52 PM2 Mins Read

ಒಂದೇ ದಿನ ಮೈಸೂರು ಜಿಲ್ಲೆಯ 2578 ಕೋಟಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ

19/07/2025 3:46 PM2 Mins Read
Recent News

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗ ಶಾಸಕ ಭೈರತಿ ಬಸವರಾಜ್

19/07/2025 3:59 PM

ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

19/07/2025 3:54 PM

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ಧರಾಮಯ್ಯ

19/07/2025 3:52 PM

‘GPay, PhonePe, Paytm’ನಲ್ಲಿ ಪಾವತಿ ವಿಫಲವಾದ್ರು ಹಣ ಕಟ್ ಆಗಿದ್ಯಾ.? ಈ ಹಂತ ಅನುಸರಿಸಿ, ಮರಳಿ ಖಾತೆ ಸೇರುತ್ತೆ

19/07/2025 3:49 PM
State News
KARNATAKA

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗ ಶಾಸಕ ಭೈರತಿ ಬಸವರಾಜ್

By kannadanewsnow0919/07/2025 3:59 PM KARNATAKA 1 Min Read

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣ ಸಂಬಂಧ ಶಾಸಕ ಭೈರತಿ ಬಸವರಾಜ್ ಗೆ ವಿಚಾರಣೆಗೆ…

ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

19/07/2025 3:54 PM

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ಧರಾಮಯ್ಯ

19/07/2025 3:52 PM

ಒಂದೇ ದಿನ ಮೈಸೂರು ಜಿಲ್ಲೆಯ 2578 ಕೋಟಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ

19/07/2025 3:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.