ವಿಜಯಪುರ : ರಾಜ್ಯದಲೊಂದು ಅಮಾನವೀಯ ಘಟನೆ ನಡೆದಿದ್ದು ವ್ಯಕ್ತಿ ಒಬ್ಬ 20,000 ಸಾಲ ವಾಪಸ್ ನೀಡಿಲ್ಲ ಎಂದು ಸಾಲ ನೀಡಿದ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ವಿಜಯಪುರದ ಚಡಚಣ ತಾಲೂಕಿನ ಹತ್ತಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಕಟ್ಟಿ ಹಾಕಿದ ಘಟನೆ ನಡೆದಿದೆ. ಚಾಂದ ಸಾಬ್ ಎನ್ನುವ ವ್ಯಕ್ತಿಯ ಕಾಲಿಗೆ ಸರಪಳಿ ಹಾಕಿ ಕಟ್ಟಿ ಹಾಕಿರುವ ಘಟನೆ ನಡೆದಿದೆ 20,000 ಸಾಲ ಪಡೆದಿದ್ದ ಚಾಂದ್ ಸಾಬ್ ಹಣ ಹಿಂದಿರುಗಿಸಿಲ್ಲ ಎಂದು ಸರಪಳಿಯಿಂದ ಕಟ್ಟಿ ಹಾಕಲಾಗಿತ್ತು. ಕುಮಾರ್ ಬಿರಾದರ್ ಚಾಂದ್ ಸಾಬ್ ನನ್ನು ಸರಪಳಿಯಿಂದ ಕಟ್ಟಿ ಹಾಕಿದ್ದು ಚಡಚಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.