Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ ಪೌತಿ ಖಾತೆ ಆಂದೋಲನ

19/07/2025 5:54 AM

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ಸಿಗಲ್ಲ ‘ಉಚಿತ ರೇಷನ್’

19/07/2025 5:51 AM

ನಿಮಿಷಕ್ಕೆ 700 ಗುಂಡು, 800 ಮೀಟರ್ ವ್ಯಾಪ್ತಿ: ಭಾರತೀಯ ಸೇನೆಗೆ AK-203 ರೈಫಲ್‌ ವಿತರಣೆ | AK-203 Rifle

19/07/2025 5:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ಸಿಗಲ್ಲ ‘ಉಚಿತ ರೇಷನ್’
KARNATAKA

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ಸಿಗಲ್ಲ ‘ಉಚಿತ ರೇಷನ್’

By kannadanewsnow5719/07/2025 5:51 AM

ಮೈಸೂರು: ಆಹಾರ, ನಾಗರಿಕ ಸರಬರಾಜು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಕೆ. ಹೆಚ್. ಮುನಿಯಪ್ಪ ಅವರು ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರಮುಖ ನಿರ್ದೇಶನೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ, ರಾಜ್ಯದಲ್ಲಿ ಇನ್ನೂ eKYC ಪ್ರಕ್ರಿಯೆಗೊಳಪಡದ ಪಡಿತರ ಚೀಟಿದಾರರ ಕುರಿತು ಗಂಭೀರ ಚಿಂತೆ ವ್ಯಕ್ತಪಡಿಸಿದ ಸಚಿವರು, ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿದರು. eKYC ಪ್ರಕ್ರಿಯೆಗಾಗಿ ಒಂದು ತಿಂಗಳ ಗಡಿಯನ್ನು ನಿಗದಿ ಮಾಡಿದ್ದು, ಈ ಅವಧಿಯಲ್ಲಿ eKYC ಪೂರೈಸದ ಸದಸ್ಯರ ಪಡಿತರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕುರಿತು ಎಚ್ಚರಿಕೆ ನೀಡಲು ಸೂಚಿಸಿದರು.

ಸಚಿವರು ಮಾತನಾಡುವ ವೇಳೆ, “ಅನಗತ್ಯವಾಗಿ ಪಡಿತರ ಕಾರ್ಡ್ಗಳನ್ನು ವಿತರಣೆ ಮಾಡಿದಲ್ಲಿ, ದೋಷಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾವಾರಿಯಾಗಿ ಜಾಗೃತಿ ಸಮಿತಿಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸಬೇಕು,” ಎಂದು ಹೇಳಿದರು. ಜೊತೆಗೆ, ಗೋದಾಮುಗಳಲ್ಲಿ ಸಂಗ್ರಹವಾಗಿರುವ ಧಾನ್ಯಗಳ ರಕ್ಷಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಿದ ಆಹಾರಧಾನ್ಯಗಳ ಸುರಕ್ಷಿತ ಸಂಗ್ರಹಣೆ ಕುರಿತು ಪ್ರಮುಖ ಸಲಹೆಗಳನ್ನು ನೀಡಿದರು.

ಅದರಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿದ ಆಯುಕ್ತ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರು, “ಈವರೆಗೆ 1.69 ಲಕ್ಷ ಫಲಾನುಭವಿಗಳಿಗೆ eKYC ಪ್ರಕ್ರಿಯೆ ಆಗಿಲ್ಲ. ಸಿಂಗಲ್ ಮೆಂಬರ್ ಕಾರ್ಡ್ಗಳಿಗೆ ಸ್ವಲ್ಪ ಹೆಚ್ಚುವರಿ ಸಮಯ ನೀಡಬೇಕಿದೆ. ಆದರೆ 4–5 ಸದಸ್ಯರಿರುವ ಕಾರ್ಡ್ಗಳಲ್ಲಿ ಕೆಲವರು ಮಾತ್ರ ಈ ಪ್ರಕ್ರಿಯೆ ಪೂರೈಸದೆ ಇದ್ದರೆ, ಅವರ ಪಡಿತರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅವಕಾಶವಿದೆ,” ಎಂದು ವಿವರಿಸಿದರು.

ಅಧಿಕಾರಿಗಳಿಗಾದ ಸಲಹೆಗಳಲ್ಲಿ – ಕಾನೂನು ಮಾಪನ ಇಲಾಖೆಗೆ ಅಗತ್ಯವಾದ ವಾಹನ ಹಾಗೂ ಸಿಬ್ಬಂದಿ ನೇಮಕ, ಆಹಾರ ನಿರೀಕ್ಷಕರ ಹುದ್ದೆಗೆ ಕಂದಾಯ ನಿರೀಕ್ಷಕರಿಗೆ ಪ್ರಭಾರ ನೀಡುವ ಕ್ರಮ, ಗುಡ್ಡ ಪ್ರದೇಶಗಳ ಮನೆಗಳಿಗೆ ಪಡಿತರ ತಲುಪಿಸುವ ವ್ಯವಸ್ಥೆ ಇತ್ಯಾದಿ ಪ್ರಸ್ತಾಪಗೊಂಡವು.

ಈ ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತರಾದ ವಿಜಯ ಜ್ಯೋತ್ಸ್ನಾ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಎಚ್. ನಟರಾಜ್, ನಿಗಮ ನಿರ್ದೇಶಕ ಜಗದೀಶ್, ಕಾನೂನು ಮಾಪನ ನಿಯಂತ್ರಕ ಎಂಎಸ್ಎನ್. ಬಾಬು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

State ration card holders take note: You won't get 'free ration' if you don't do e-KYC
Share. Facebook Twitter LinkedIn WhatsApp Email

Related Posts

ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ ಪೌತಿ ಖಾತೆ ಆಂದೋಲನ

19/07/2025 5:54 AM1 Min Read

ಯುಜಿಸಿಇಟಿಗೆ ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

19/07/2025 5:45 AM1 Min Read

ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ‘ಆಯುಷ್ಮಾನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

19/07/2025 5:41 AM2 Mins Read
Recent News

ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ ಪೌತಿ ಖಾತೆ ಆಂದೋಲನ

19/07/2025 5:54 AM

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ಸಿಗಲ್ಲ ‘ಉಚಿತ ರೇಷನ್’

19/07/2025 5:51 AM

ನಿಮಿಷಕ್ಕೆ 700 ಗುಂಡು, 800 ಮೀಟರ್ ವ್ಯಾಪ್ತಿ: ಭಾರತೀಯ ಸೇನೆಗೆ AK-203 ರೈಫಲ್‌ ವಿತರಣೆ | AK-203 Rifle

19/07/2025 5:50 AM

ಉದ್ಯೋಗವಾರ್ತೆ : `ಭಾರತೀಯ ರೈಲ್ವೆ ಇಲಾಖೆ’ಯಲ್ಲಿ 30,307 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Railway Recruitment-2025

19/07/2025 5:49 AM
State News
KARNATAKA

ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ ಪೌತಿ ಖಾತೆ ಆಂದೋಲನ

By kannadanewsnow5719/07/2025 5:54 AM KARNATAKA 1 Min Read

ಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಈ ಜಮೀನಿನ ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಇ-ಪೌತಿ ಆಂದೋಲನದ…

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ಸಿಗಲ್ಲ ‘ಉಚಿತ ರೇಷನ್’

19/07/2025 5:51 AM

ಯುಜಿಸಿಇಟಿಗೆ ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

19/07/2025 5:45 AM

ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ‘ಆಯುಷ್ಮಾನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

19/07/2025 5:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.