ನವದೆಹಲಿ : ಕೇಂದ್ರ ಸರ್ಕಾರ ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಬಡ ಜನರಿಗೆ ಆರ್ಥಿಕ ನೆರವು ನೀಡಲು ಮೋದಿ ಸರ್ಕಾರ ಯೋಜನೆಗಳನ್ನ ರೂಪಿಸುತ್ತಿದೆ. ಅದ್ರಂತೆ, ಇಂದು (ಅಕ್ಟೋಬರ್ 17) ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಆಯುಷ್ಮಾನ್ ಕಾರ್ಡ್’ಗಳನ್ನ ವಿತರಣೆಗೆ ಚಾಲನೆ ನೀಡಿದರು.
PM Modi kickstarts the distribution of PMJAY-MA Yojana Ayushman cards in Gujarat via video conferencing.
The health scheme was launched by PM Modi on September 4, 2012 for BPL families. Under the scheme, govt met hospitalisation & surgical procedures up to Rs 2 lakhs. pic.twitter.com/3g78SGaXcl
— ANI (@ANI) October 17, 2022
ಅಂದ್ಹಾಗೆ, ಆಯುಷ್ಮಾನ್ ಭಾರತ್ ಯೋಜನೆಯು ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿ, ಸರ್ಕಾರವು ದೇಶದ ಬಡ ವರ್ಗಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಯೋಜನೆಯನ್ನ ಪಡೆಯಲು ಸರ್ಕಾರವು ಪ್ರತಿಯೊಬ್ಬ ಫಲಾನುಭವಿಗೆ ಆಯುಷ್ಮಾನ್ ಕಾರ್ಡ್ ನೀಡುತ್ತದೆ.
ಈ ಯೋಜನೆ ಏನು?
ವಾಸ್ತವವಾಗಿ ಈ ಆಯುಷ್ಮಾನ್ ಯೋಜನೆಯಡಿ ಅರ್ಹ ಜನರ ಆಯುಷ್ಮಾನ್ ಕಾರ್ಡ್ಗಳನ್ನು ಉತ್ಪಾದಿಸಲಾಗುತ್ತದೆ. ಆಗ ಕಾರ್ಡುದಾರರು 5 ಲಕ್ಷದವರೆಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಅದಕ್ಕೂ ಮೊದ್ಲು ನೀವು ಈ ಕಾರ್ಡ್ಗೆ ಅರ್ಹರಾಗಿದ್ದೀರಾ? ಎಂಬುದನ್ನು ನೀವು ತಿಳಿದುಕೊಳ್ಳಬೇಕು.
ಅರ್ಹತೆಗಳು ಈ ಕೆಳಗಿನಂತಿವೆ..!
– ಆಯುಷ್ಮಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಮೊದಲು ನೀವು ಅಧಿಕೃತ ಪೋರ್ಟಲ್ಗೆ ತೆರಳಬೇಕು.
– ಮುಂದೆ ಇಲ್ಲಿ ನೀವು ‘ಆಮ್ ಐ ಎಲಿಜಿಬಲ್’ ಆಯ್ಕೆಯನ್ನ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ OTP ನಮೂದಿಸಿ.
– ಈಗ ನೀವು ಇಲ್ಲಿ ಎರಡು ಆಯ್ಕೆಗಳನ್ನ ನೋಡುತ್ತೀರಿ. ನೀವು ಮೊದಲು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು ಮತ್ತು ಎರಡನೆಯದಾಗಿ ಮೊಬೈಲ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಹಾಗಾದರೆ ನೀವು ಅರ್ಹರೇ ಅಥವಾ ಇಲ್ಲವೇ? ಎಂಬುದು ಗೊತ್ತಾಗಲಿದೆ. ಅರ್ಹತೆ ಇದ್ದರೆ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು.
ಅಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 12ನೇ ಕಂತನ್ನು ಪ್ರಧಾನಿ ಮೋದಿ ಇಂದು ರೈತರ ಖಾತೆಗಳಿಗೆ ಜಮಾ ಮಾಡಿದರು. ಇಂದು ಬೆಳಗ್ಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಿ ಸ್ಟಾರ್ಟ್ಅಪ್ ಸಮ್ಮೇಳನ, ಪ್ರದರ್ಶನ ಮತ್ತು 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಿಸಿದರು. ಇದರ ಭಾಗವಾಗಿ ಪಿಎಂ ಕಿಸಾನ್ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಯ್ತು.