ಬೆಂಗಳೂರು : ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ, ಭಾರತ್ ಜೋಡೋ ಯಾತ್ರೆ’ ಹೃದಯ ಬೆಸೆಯುವ ಯಾತ್ರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ‘ ಈಗಾಗಲೇ ತಮಿಳುನಾಡು,ಕೇರಳ ಮತ್ತು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ. ಯಾಕೆಂದರೆ ಇದು ಹೃದಯ ಬೆಸೆಯುವ ಯಾತ್ರೆ’ ಎಂದಿದ್ದಾರೆ,
ಇನ್ನೊಂದು ಟ್ವೀಟ್ ನಲ್ಲಿ ಮೊದಲು ಅಪಮಾನಿಸುತ್ತಾರೆ, ನಂತರ ಅನುಮಾನಿಸುತ್ತಾರೆ, ಕೊನೆಗೆ ಸನ್ಮಾನಿಸುತ್ತಾರೆ ಎಂಬಂತೆ ಜೋಡೋ ಯಾತ್ರೆ ಪ್ರಾರಂಭದಲ್ಲಿ BJPಯವರು ಯಾತ್ರೆಯನ್ನು ಅಪಮಾನಿಸುವ ಕೆಲಸ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು ನಿಂದಿಸಿದ್ದರು. ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ BJPಯವರಿಗೆ ಕಷ್ಟವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
3
ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ.ಈಗಾಗಲೇ ತಮಿಳುನಾಡು,ಕೇರಳ ಮತ್ತು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ.
ಯಾಕೆಂದರೆ ಇದು ಹೃದಯ ಬೆಸೆಯುವ ಯಾತ್ರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 17, 2022
2
ಮೊದಲು ಅಪಮಾನಿಸುತ್ತಾರೆ, ನಂತರ ಅನುಮಾನಿಸುತ್ತಾರೆ, ಕೊನೆಗೆ ಸನ್ಮಾನಿಸುತ್ತಾರೆ ಎಂಬಂತೆ ಜೋಡೋ ಯಾತ್ರೆ ಪ್ರಾರಂಭದಲ್ಲಿ BJPಯವರು ಯಾತ್ರೆಯನ್ನು ಅಪಮಾನಿಸುವ ಕೆಲಸ ಮಾಡಿದ್ದರು.ಹೆಜ್ಜೆ ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು ನಿಂದಿಸಿದ್ದರು.
ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ BJPಯವರಿಗೆ ಕಷ್ಟವಾಗಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 17, 2022
BIG NEWS: ‘ಕಾಂಗ್ರೆಸ್’ನಿಂದ ‘ಸಚಿವ ಬಿ.ಶ್ರೀರಾಮುಲು’ ವಿರುದ್ಧ ‘6 ಸಾವಿರ ಪುಟ’ಗಳ ‘ಚಾರ್ಜ್ ಶೀಟ್ ರಿಲೀಸ್’