ಚಿತ್ರದುರ್ಗ : ಮುರುಘಾ ಮಠದಲ್ಲಿ ಮಗು ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ವಕೀಲ ಮಧುಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮಠದಲ್ಲಿ ಸಿಕ್ಕ ಮಗು ಮುರುಘಾ ಶ್ರೀಗಳಿಗೆ ಅವರದ್ದೆಂಬ ಶಂಕೆ ವ್ಯಕ್ತವಾಗಿದೆ.
BIGG NEWS: ಎಸ್. ಸಿ ಎಸ್.ಟಿ ಮೀಸಲಾತಿ ಹೆಚ್ಚಿಸುವುದಕ್ಕೆ ಮೂರು ವರ್ಷ ಬೇಕಾ? ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ
ಪತ್ತೆಯಾದ ಮಗು ಶ್ರೀಗಳಿಗೆ ಜನಿಸಿದ್ದೆಂಬ ಮಾಹಿತಿ ಇದೆ. ಪೋಷಕರ ಪತ್ತೆಗೆ ಮಗುವಿನ ಡಿಎನ್ ಎ ಟೆಸ್ಟ್ ಆಗಬೇಕಿದೆ. ಎಂದು ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಠದಲ್ಲಿ ಪತ್ತೆಯಾದ ಮಗು ಶ್ರೀಗಳಿಗೆ ಜನಿಸಿದ್ದೆಂಬ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಅವರು ರಸ್ತೆ ಬದಿ ಮುಗುವಿಟ್ಟು ಡ್ರಾಮಾ ಮಾಡಿರುವ ಶಂಕೆ ಇದೆ. ಈ ರೀತಿ ಮಠದಲ್ಲಿ ಇನ್ನು ಹತ್ತಾರು ಮಕ್ಕಳಿರುವ ಶಂಕೆ ವ್ತಕ್ತವಾಗಿದೆ ಎಂದು ಆರೋಪಿಸಿದ್ದಾರೆ.
BIGG NEWS: ಎಸ್. ಸಿ ಎಸ್.ಟಿ ಮೀಸಲಾತಿ ಹೆಚ್ಚಿಸುವುದಕ್ಕೆ ಮೂರು ವರ್ಷ ಬೇಕಾ? ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ
ಇನ್ನು ಮಠದ ಮುಂದಿನ ಕಾಂಪೌಂಡ್ ನಲ್ಲಿ ನಾಲ್ಕೂವರೆ ವರ್ಷದ ಹಿಂದೆ ಈ ಮಗು ಸಿಕ್ಕಿತ್ತು ಎಂದು ಮಠದ ಬಳಿಯ ಹೋಟೆಲ್ ನ ಮಹಿಳೆಯೊಬ್ಬರು ಮಾಹಿತಿ ನೀಡಿದ್ದು, ಫೈರೋಜಾ ಎಂಬ ಮಹಿಳೆ ನಾಲ್ಕುವರೆ ವರ್ಷದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದು, ಮಗು ಹುಟ್ಟಿದ ನಾಲ್ಕೈದು ದಿನಗಳಲ್ಲಿ ಮಠದ ಮುಂದೆ ಕಾಂಪೌಂಡ್ ಪಕ್ಕದಲ್ಲಿ ಸಿಕ್ಕಿತ್ತು. ಈ ವೇಳೆ ಆ ಮಗುವಿನ ಬಳಿ ಪತ್ರವಿತ್ತು. ಅದರಲ್ಲಿ ದಯವಿಟ್ಟು ಮಗುವನ್ನು ಮಠಕ್ಕೆ ಸೇರಿಸಬೇಕು ಎಂದು ಬರೆಯಲಾಗಿತ್ತು. ಹೀಗಾಗಿ ಸ್ವಾಮೀಜಿ, ಮಠದ ಸಿಬ್ಬಂದಿಯನ್ನು ಇಲ್ಲಿ ಕಳುಹಿಸಿ, ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.