ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಅವರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ವ್ಯಾಪ್ತಿಯನ್ನ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಅಸಂಘಟಿತ ವಲಯದಲ್ಲಿ 60 ವರ್ಷ ತುಂಬಿದ ನಂತ್ರ ಈ ಯೋಜನೆ ಜಾರಿಗೆ ಬಂದರೆ ತಿಂಗಳಿಗೆ 3,000 ರೂ. ಸಿಗಲಿದೆ.
ಉದ್ದೇಶಿತ ಯೋಜನೆಯನ್ನ ಸಾರ್ವತ್ರಿಕ ಪಿಂಚಣಿ ಯೋಜನೆ ಹೆಸರಿನಲ್ಲಿ ಘೋಷಿಸಲಾಗಿದೆ. ಉದ್ದೇಶಿತ ಯೋಜನೆಯಲ್ಲಿ ನಿವೃತ್ತಿ ಪಿಂಚಣಿ, ವಿಂತತು ಪಿಂಚಣಿ, ಮಕ್ಕಳ ಪಿಂಚಣಿ ಮತ್ತು ಅಂಗವೈಕಲ್ಯ ಪಿಂಚಣಿಗೆ ವಿಶೇಷ ನಿಬಂಧನೆಗಳನ್ನ ಒಳಗೊಂಡಿದೆ. ಆದಾಗ್ಯೂ, ಇದನ್ನು ಪಡೆಯಲು, ಸೇವೆಯ ಕನಿಷ್ಠ ಅರ್ಹತಾ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಹೆಚ್ಚಿಸಲಾಗುವುದು.
ನೀವು 60 ವರ್ಷಕ್ಕಿಂತ ಮೊದಲು ಮೃತಪಟ್ಟರೇ, ಅದನ್ನ ನಿಮ್ಮ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಈ ಹಣವನ್ನ ಪಡೆಯಲು, ನೀವು 5.4 ಲಕ್ಷ ರೂ.ಗಳನ್ನ ಠೇವಣಿ ಇಡಬೇಕು. ನಂತ್ರ ತಿಂಗಳಿಗೆ 3,000 ರೂಪಾಯಿ ಲಭ್ಯವಾಗಲಿದೆ. ಇನ್ನು ಈ ಪಿಂಚಣಿಯು ಏನನ್ನು ಪಾವತಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದ್ಹಾಗೆ. ತಿಂಗಳಿಗೆ 15,000 ರೂ.ಗಳನ್ನ ಗಳಿಸುವ ಎಲ್ಲರೂ ಇಪಿಎಫ್ಒಗೆ ಪಾವತಿಸಬಹುದು.
ಅಲ್ಲದೇ, ದೀಪಾವಳಿಗೆ ಮೊದಲು ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ ಸಿಗಲಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ, ಇಪಿಎಫ್ಒ ದೀಪಾವಳಿಗೆ ಮೊದಲು ಬಡ್ಡಿಯನ್ನ ಕ್ರೆಡಿಟ್ ಮಾಡುತ್ತದೆ. ಶೇಕಡಾ 8.1ರಷ್ಟು ಬಡ್ಡಿದರವನ್ನ ಅಕ್ಟೋಬರ್ ಅಂತ್ಯದ ವೇಳೆಗೆ ಗ್ರಾಹಕರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎನ್ನಲಾಗಿದೆ.