BREAKING: ಬಳ್ಳಾರಿಯಲ್ಲಿ ವಿಷಕಾರಿ ಬೀಜದ ಹಣ್ಣು ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬಳ್ಳಾರಿ: ಜಿಲ್ಲೆಯಲ್ಲಿ ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳು ವಿಷಕಾರಿ ಬೀಜದ ಹಣ್ಣು ಸೇವಿಸಿದ್ದರಿಂದ, ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲಾ ವಿರಾಮದ ಸಂದರ್ಭದಲ್ಲಿ ವಿಷಕಾರಿ ಬೀಜವಿರುವಂತ ಕಾಡು ಹಣ್ಣುಗಳನ್ನು ಸೇವಿಸಿದ್ದಾರೆ. ಈ ಹಣ್ಣುಗಳನ್ನು ತಿಂದ ಕೂಡಲೇ, ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳು ವಿಷಕಾರಿ ಬೀಜಗಳನ್ನು ತಿಂದು ಅಸ್ವಸ್ಥಗೊಂಡ ವಿಷಯ ತಿಳಿದಂತ ಶಿಕ್ಷಕರು, ಕೂಡಲೇ ಅವರನ್ನು ಸಮೀಪದ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆ … Continue reading BREAKING: ಬಳ್ಳಾರಿಯಲ್ಲಿ ವಿಷಕಾರಿ ಬೀಜದ ಹಣ್ಣು ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು