ಕೊಡಗು: ಕೊಡಗಿನ ಕುಶಾಲನಗರದಲ್ಲಿ ಗುಂಡಿನ ಸುದ್ದಿ ತಡರಾತ್ರಿ ಕೇಳಿ ಬಂದಿದ್ದು, ಸ್ಥಳೀಯ ಉದ್ಯಮ ಶಶಿಧರ್ ಎನ್ನುವವರ ಮೇಲೆ ಅನುದೀಪ್‌ ಎನ್ನುವವರು ಎಂಟು ಸುತ್ತಿನ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.

ಸದ್ಯ ಶಶಿಧರ್‌ ಕಾಲಿಗೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಅಂಥ ತಿಳಿದು ಬಂದಿದೆ. ನಿನ್ನೆ ತಡರಾತ್ರಿ ತನ ಇಬ್ಬರು ಪಾರ್ಟಿ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರು ಕೂಡ ಪಾರ್ಟನರ್‌ ಆಗಿದ್ದಾರೆ ಎನ್ನಲಾಗಿದೆ. ಪಾರ್ಟಿಯಲ್ಲಿ ಜಗಳವಾದ ಬಳಿಕ ಇಬ್ಬರು ಕೂಡ ಮನೆಗೆ ವಾಪಸ್ಸು ಹೋಗಿದ್ದಾರೆ, ಆದರೆ ಕೆಲವೇ ಗಂಟೆಯಲ್ಲಿ ಶಶಿಧರ್‌ ಅವರು ಅನುದೀಪ್ ಅವರ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅನುದೀಪ್‌ ಗುಂಡಿನ ದಾಳಿ ನಡೆಸಿದ್ದು, ಅಲ್ಲೇ ಇದ್ದ ಫಾರ್ಚೈನರ್ ಕಾರಿನ ಮೇಲೆ ಗುಂಡಿನ ದಾಳಿಯ ಕೂರುಹುಗಳು ಕಂಡು ಬಂದಿದೆ.

Share.
Exit mobile version