ದಕ್ಷಿಣಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮುಂದುವರೆದು, ಇದೇ ಪ್ರಕರಣದಲ್ಲಿ ಏಳನೇ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

BIG NEWS: ‘ಸೂಪರ್ ಸ್ಟಾರ್ ರಜನಿ ಕಾಂತ್’ ಪತ್ನಿ ಲತಾಗೆ ಸಂಕಷ್ಟ: ‘ಪೋರ್ಜರಿ ಕೇಸ್’ ಮುಂದುವರೆಸಲು ಹೈಕೋರ್ಟ್ ಅಸ್ತು

ಇಂದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ, ಸುಳ್ಯ ಟೌನ್ ಜಟ್ಟಿಪಳ್ಳ ನಿವಾಸಿಯಾಗಿರುವಂತ ಅಬ್ಬಾಸ್ ಎಂಬುವರ ಪುತ್ರ ಅಬ್ದುಲ್ ಕಬೀರ್ ಸಿ.ಎ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

BIG BREAKING NEWS: ಈ ವರ್ಷದ ಯುಎಸ್ ಓಪನ್ ಬಳಿಕ ನಿವೃತ್ತಿ – ಟೆನಿಸ್ ದಂತಕತೆ ಸೆರೆನಾ ವಿಲಿಯಮ್ಸ್ ಘೋಷಣೆ | Serena Williams Set To Retire

ಬಂಧಿತ ರೋಪಿ ಅಬ್ದುಲ್ ಕಬೀರ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸಂಬಂಧ ಹೊಂದಿದ್ದ ಎಂಬುದಾಗಿ ಈ ಹಿಂದೆ ಬಂಧಿಸಲ್ಪಟ್ಟಿದ್ದಂತ ಆರೋಪಿಗಳ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಇಂದು ಆತನನ್ನ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

Share.
Exit mobile version