ಮಹಾರಾಷ್ಟ್ರದಲ್ಲಿ ಆಳದ ಕಮರಿಗೆ ಬಿದ್ದ ವ್ಯಾನ್: ನಾಲ್ವರ ದುರ್ಮರಣ, 9 ಮಂದಿಗೆ ಗಾಯ

ನಾಗ್ಪುರ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಪ್ರಯಾಣಿಕರಿದ್ದ ವ್ಯಾನ್ ಕಮರಿಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರು ಅಕೋಲಾ ಜಿಲ್ಲೆಯ ಅಕೋಟ್‌ನವರಾಗಿದ್ದು, ವಾರದ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡಿ ಪಿಕಪ್ ವ್ಯಾನ್‌ನಲ್ಲಿ ಧರಣಿ ತಾಲೂಕಿನ ಸುಸುರ್ದಾ ಗ್ರಾಮದಿಂದ ಹಿಂತಿರುಗುತ್ತಿದ್ದರು. ಮೆಲ್ಘಾಟ್ ಪ್ರದೇಶದ ರಾಣಿಗಾಂವ್ ಬಳಿ ರಾತ್ರಿ 7 ಗಂಟೆಗೆ ವಾಹನವು ಕಮರಿಗೆ ಬಿದ್ದಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಗಾಯಗೊಂಡ ಒಂಬತ್ತು ಮಂದಿಯನ್ನು ಅಕೋಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು … Continue reading ಮಹಾರಾಷ್ಟ್ರದಲ್ಲಿ ಆಳದ ಕಮರಿಗೆ ಬಿದ್ದ ವ್ಯಾನ್: ನಾಲ್ವರ ದುರ್ಮರಣ, 9 ಮಂದಿಗೆ ಗಾಯ