ಪುರಿ ಜಗನ್ನಾಥನ ಉತ್ಸವದ ವೇಳೆ ಘೋರ ದುರಂತ: ಪಟಾಕಿ ಸಿಡಿದು ಮೂವರು ಸಾವು, 32 ಮಂದಿಗೆ ಗಾಯ

ಪುರಿ: ಒಡಿಶಾದ ಪುರಿಯಲ್ಲಿರುವ ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. 32 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನರೇಂದ್ರ ಪುಷ್ಕರಿಣಿ ಎಂಬ ಜಲಮೂಲದ ದಡದಲ್ಲಿ ಬುಧವಾರ ರಾತ್ರಿ ಈ ಘಟನೆ ವರದಿಯಾಗಿದೆ. ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಓರ್ವ ಬಾಲಕ ಮೃತಪಟ್ಟರೆ, ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಬ್ಬವನ್ನು ಆಚರಿಸಲು ನೂರಾರು ಭಕ್ತರು … Continue reading ಪುರಿ ಜಗನ್ನಾಥನ ಉತ್ಸವದ ವೇಳೆ ಘೋರ ದುರಂತ: ಪಟಾಕಿ ಸಿಡಿದು ಮೂವರು ಸಾವು, 32 ಮಂದಿಗೆ ಗಾಯ