ವೇತನ ಸಮಸ್ಯೆಗೆ ಬೇಸತ್ತು ಕೋಲಾರದಲ್ಲಿ’108 Ambulance’ ಚಾಲಕ ಆತ್ಮಹತ್ಯೆಗೆ ಯತ್ನ

ಕೋಲಾರ:  ವೇತನ ಸಮಸ್ಯೆ ಹಿನ್ನೆಲೆ ಮನನೊಂದು 108 ಅಂಬುಲೆನ್ಸ್ ಚಾಲಕ (Ambulance Driver) ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರ ವೇತನ ಪರಿಷ್ಕರಣೆ ಹಾಗೂ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ  ಕೋಲಾರ ತಾಲೂಕು ವೇಮಗಲ್ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್ ಚಾಲಕ ಅರುಣ್ ಕುಮಾರ್ ರಾತ್ರಿ 10 ಗಂಟೆ ಸುಮಾರಿಗೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ 8 ವರ್ಷಗಳಿಂದ ಅಂಬುಲೆನ್ಸ್ ಚಾಲಕನಾಗಿದ್ದ ಅರುಣ್ ವೇತನ ಹೆಚ್ಚಳವಾಗಲಿದೆ, ನಮ್ಮ ಸಮಸ್ಯೆ ಪರಿಹಾರ ಆಗಲಿದೆ ಎಂದು ಕಾದು ಕುಳಿತಿದ್ದರು. … Continue reading ವೇತನ ಸಮಸ್ಯೆಗೆ ಬೇಸತ್ತು ಕೋಲಾರದಲ್ಲಿ’108 Ambulance’ ಚಾಲಕ ಆತ್ಮಹತ್ಯೆಗೆ ಯತ್ನ