ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಬಾರಿಮಳೆಯಿಂದಾಗಿ ನಗರದ ಜನತೆ ತೊಂದರೆಗೆ ಈಡಾಗಿದ್ದ ವೇಳೇಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಹೋಟೆಲ್‌ವೊಂದಕ್ಕೆ ತೆರಳಿ ದೋಸೆ ತಿಂದದ್ದು ವಿವಾದಕ್ಕೆ ಕಾರಣವಾಯಿತು, ಕಾಂಗ್ರೆಸ್‌ ಈ ಬಗ್ಗೆ ತೀವ್ರವಾದ ವಾಗ್ದಾಳಿಯನ್ನು ನಡೆಸಿತ್ತು.

ಈ ನಡುವೆ ಕಾಂಗ್ರೆಸ್‌ ಕಾರ್ಯಕರ್ತರು ತೇಜಸ್ವಿ ಸೂರ್ಯವರ ವಿರುದ್ದ ಕಿರಿಕಾರಿ ದೋಸೆ ಕಳಿಸಿದ್ದರು. ಆದರೆ ಈ ಬಗ್ಗೆ ಟ್ವಿಟ್‌ ಮಾಡಿದ್ದ ತೇಜಸ್ವಿ ಸೂರ್ಯ ನನಗೆ ದೋಸೆ ತಲುಪಿಲ್ಲ ಅಂತ ಕಾಂಗ್ರೆಸ್‌ ಅನ್ನು ಕುಟುಕಿದ್ದರು. ಈ ನಡುವೆ ಇದೀಗ ಮತ್ತೊಮ್ಮೆ ದೋಸೆಯನ್ನು ಡನ್ಜೋ ಮೂಲಕ ಮತ್ತೆ ಕಾಂಗ್ರೆಸ್‌ ಕಾರ್ಯಕರ್ತರು ದೋಸೆಯನ್ನು ಪಾರ್ಸಲ್‌ ಮಾಡಿದ್ದಾರೆ.

Share.
Exit mobile version