ಹುಬ್ಬಳ್ಳಿ: ʻ ಸರಳ ವಾಸ್ತು ʼ ಖ್ಯಾತಿಯಾಗಿದ್ದ ಚಂದ್ರಶೇಖರ್ ಗುರೂಜಿ ಶವ ಪರೀಕ್ಷೆ ಮುಕ್ತಾಯಗೊಂಡಿದ್ದು, ಮೃತದೇಹವನ್ನು ಕಿಮ್ಸ್ ಶವಾಗಾರದಿಂದ ಸ್ವಗ್ರಾಮಕ್ಕೆ ತರಲಾಗುತ್ತಿದೆ.
ಗುರೂಜಿ ಮೃತದೇಹ ನೋಡುತ್ತಿದ್ದಂತೆ ಕುಟುಂಬದವರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.ಸ್ವಗ್ರಾಮದಲ್ಲಿ ವೈದಿಕರು ಪೂಜೆ ನೆರವೇರಿಸಿದರು. ಈ ವೇಳೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಂತಿಮ ದರ್ಶನ ಪಡೆದರು.
ಗುರೂಜಿ ಪಾರ್ಥೀವ ಶರೀರವನ್ನು ವೈಕುಂಠ ರಥ ವಾಹನದ ಮೂಲಕ ಮೆರವಣಿಗೆ ಮೂಲಕ ಕೇಶ್ವಾಪುರ ಸುಳ್ಳ ರಸ್ತೆಯ ಗುರೂಜಿ ಜಮೀನಿಗೆ ರವಾನಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರೀಯೆ ನಡೆಯುವ ಸುಳ್ಳಾ ಗ್ರಾಮದಲ್ಲಿ ಕುಟುಂಬಸ್ಥರು, ಸಿಬ್ಬಂದಿಗಳ ಗೋಳಾಟ. ಶೋಕದಲ್ಲಿ ಮುಳುಗಿದೆ.