ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕುರಿತು ಕಾಮೆಂಟ್ ಮಾಡಿದಕ್ಕಾಗಿ ಮಾಜಿ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಕ್ಕೆ ಕಾರಣರಾಗಿದ್ದಾರೆ.
ದಿಲೀಪ್ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಂಠಿ ಮತ್ತು ಇಕೋ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದೆ. ಆದರೆ, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷರು ಸಹಜವಾಗಿಯೇ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಬದಲಾಗಿ ರಾಜ್ಯದ ಆಡಳಿತದ ಆಡಳಿತಕ್ಕೆ ತಿರುಗೇಟು ನೀಡಿದರು.
“ನನ್ನ ವಿರುದ್ಧ ಪಶ್ಚಿಮ ಬಂಗಾಳದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಎಫ್ಐಆರ್ಗಳನ್ನು ದಾಖಲಾಗಿದೆ. ಟಿಎಂಸಿ ಇನ್ನೇನೂ ಮಾಡಲು ಸಾಧ್ಯವಿಲ್ಲ, ನಾನು ನಾಟಕ ಮಾಡಿಲ್ಲ, ಈಗ ನಾನು ಬೀದಿಯಲ್ಲಿದ್ದೇನೆ. ಪೊಲೀಸರನ್ನು ಕಳುಹಿಸಿ ಧೈರ್ಯವಿದ್ದರೆ ನನ್ನನ್ನು ಬಂಧಿಸಿ” ಎಂದು ದಿಲೀಪ್ ಘೋಷ್ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದಾರೆ.
TMC is falling on the feet of the governor so that I can be arrested. The Chief Minister herself disrespects the same governor. They are shameless!
I dare TMC to arrest me ! pic.twitter.com/8cVZAUjvLS
— Dilip Ghosh (@DilipGhoshBJP) July 7, 2022
ದಿಲೀಪ್ ಘೋಷ್ ವಿರುದ್ಧ ತೃಣಮೂಲ (ಟಿಎಂಸಿ) ರಾಜಭವನದ ಮೊರೆ ಹೋಗಿತ್ತು. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರ ವಿರುದ್ಧ ರಾಜ್ಯಪಾಲ ಜಗದೀಪ್ ಧಂಖರ್ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ರಾಜ್ಯದ ಆಡಳಿತ ಪಕ್ಷದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಕೇರಳ: ಸ್ಕ್ರ್ಯಾಪ್ ಸಂಗ್ರಹದ ವೇಳೆ ಸಿಕ್ಕ ಸ್ಟೀಲ್ ಬಾಕ್ಸ್ ಸ್ಫೋಟ: ತಂದೆ, ಮಗ ಸಾವು